ನಗರದಲ್ಲಿ ಇಂದು ಕರವೇಯಿಂದ ಸರ್ಕಾರದ  ಅಣಕು ಕೈಲಾಸ ಸಮಾರಾಧನೆ

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ  ಇಂದು 11.30ಕ್ಕೆ   ಗುರುಭವನದ ಬಳಿ  ತಮಿಳುನಾಡಿಗೆ ನೀರು ಹರಿಸಲು ಕಾರಣವಾದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ಭೂತ ದಹನ ದಹಿಸಿ, ನಂತರ ಈ ಮೂವರ ಅಣಕು  ಕೈಲಾಸ ಸಮಾರಾಧನೆ ನಡೆಸಲಾಗುವುದೆಂದು ಕರವೇ ಜಿಲ್ಲಾ ಅಧ್ಯಕ್ಷ ಎಂ.ಎಸ್. ರಾಮೇಗೌಡ ತಿಳಿಸಿದ್ದಾರೆ.

error: Content is protected !!