ದಾವಣಗೆರೆ, ಸೆ.26- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಕಳೆದ ವಾರ ಏರ್ಪಡಿಸಿದ್ದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಫರ್ಧೆಯಲ್ಲಿ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿ ದರ್ಶನ್ ಆರ್. ಅವರು 65 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಕ್ರೀಡಾಪಟುವಿಗೆ ಕಾಲೇಜಿನ ನಿರ್ವಹಣಾ ಪ್ರತಿನಿಧಿ ವೈ.ಯು. ಸುಭಾಶ್ಚಂದ್ರ, ಪ್ರಾಂಶುಪಾಲ ಡಾ. ಸಂಜಯ್ ಪಾಂಡೆ ಎಂ.ಬಿ, ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ ಕೆ. ಕೆ. ಹಾಗೂ ಕ್ರೀಡಾ ಸಂಯೋಜಕ ಡಾ. ಕಿರಣ್ಕುಮಾರ್ ಎಚ್.ಎಸ್. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಅಜ್ಜಯ್ಯ ಜಿ.ಬಿ. ಮತ್ತು ಹನುಮಂತಪ್ಪ ವೈ. ಇವರುಗಳು ಅಭಿನಂದಿಸಿದ್ದಾರೆ.
ದೇಹದಾರ್ಢ್ಯ ಸ್ಪರ್ಧೆಯಲ್ಲಿ ಜಿ.ಎಂ.ಐ.ಟಿ. ಪ್ರಥಮ ಸ್ಥಾನ
![20 gmit 27.09.2023 ದೇಹದಾರ್ಢ್ಯ ಸ್ಪರ್ಧೆಯಲ್ಲಿ ಜಿ.ಎಂ.ಐ.ಟಿ. ಪ್ರಥಮ ಸ್ಥಾನ](https://janathavani.com/wp-content/uploads/2023/09/20-gmit-27.09.2023.jpg)