ದಾವಣಗೆರೆ, ಸೆ. 25 – ಭದ್ರಾ ನಾಲೆಯಿಂದ ರೈತರ ಬೆಳೆಗಳಿಗೆ 100 ದಿವಸ ನೀರು ಹರಿಸಲು ಹಾಗೂ ಕಾವೇರಿ ನದಿ ಪ್ರಾಂತ್ಯದ ರೈತರ ಹಿತರಕ್ಷಣೆಯನ್ನು ಸರ್ಕಾರ ಕಾಪಾಡಬೇಕೆಂದು ಜಿಲ್ಲಾ ವಕೀಲರ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ರೈತರ ಹಿತರಕ್ಷಣೆಯನ್ನು ಕಾಪಾಡಲು ಸರ್ಕಾರಕ್ಕೆ ಮನವಿ ಕಳುಹಿಸಿ ಕೊಡುವುದಾಗಿ ತಿಳಿಸಿದರು.
ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ ಗೋಪನಾಳ್, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ, ಕಾರ್ಯಕಾರಿ ಸಮಿತಿ ಸದಸ್ಯರಾದ ವಾಗೀಶ್ ಕಟಗಿಹಳ್ಳಿಮಠ, ಅಜೇಯ್, ಭಾಗ್ಯಲಕ್ಷ್ಮಿ, ನಾಗರಾಜ್, ಚೌಡಪ್ಪ, ನೀಲಕಂಠಯ್ಯ, ಸಂತೋಷಕುಮಾರ್, ರಾಘವೇಂದ್ರ, ಪಾಟೀಲ್, ಲೋಕಿಕೆರೆ ಪ್ರದೀಪ್, ಚನ್ನಮಲ್ಲೇಶ್, ಶ್ರೀನಿವಾಸ, ಆಂಜನೇಯ ಗುರೂಜಿ, ಮಂಜು, ತಿಳುವಳ್ಳಿ ಬಸವರಾಜ, ಲಕ್ಕಪ್ಪ, ಬಸವರಾಜ್ ಕ್ಯಾರೆಕಟ್ಟಿ, ಕೆಂಜಪ್ಪ, ಮಂಜಪ್ಪ, ರಾಮಣ್ಣ, ಶಾಂತವೀರಪ್ಪ, ಮನು, ಬಸಣ್ಣ, ಶಿವಯೋಗಿ ಕುಸಗೂರು, ಸದಾಶಿವ, ಗಣೇಶ್, ನಾಗರಾಜ್ ಪಾಟೀಲ್ ಇತರರು ಇದ್ದರು.