ಇಂದು ಅಮಾವಾಸ್ಯೆ, 19ರಂದು ಗಣಪತಿ ಹಬ್ಬ ಆಚರಣೆಗೆ ಪ್ರಾಶಸ್ತ್ಯ

ಇಂದು ಅಮಾವಾಸ್ಯೆ,  19ರಂದು ಗಣಪತಿ ಹಬ್ಬ ಆಚರಣೆಗೆ ಪ್ರಾಶಸ್ತ್ಯ

ದಾವಣಗೆರೆ, ಸೆ. 13- ನಾಳೆ ಅಮಾವಾಸ್ಯೆ ಇರುತ್ತದೆ ಮತ್ತು ಇದೇ ದಿನಾಂಕ 18 ರಂದು ಸೋಮವಾರ ಮಧ್ಯಾಹ್ನ 12.42 ರವರೆಗೆ ತೃತೀಯ ತಿಥಿ ಇದ್ದು, ಅಂದು ಸ್ವರ್ಣಗೌರಿ ವ್ರತ ಆಚರಿಸಬೇಕು. ದಿನಾಂಕ 19 ರಂದು ಮಧ್ಯಾಹ್ನ 12.42 ರವರೆಗೆ ಚತುರ್ಥಿ ಇರುವುದರಿಂದ ಅಂದೇ ಗಣೇಶ ಹಬ್ಬ ಆಚರಿಸಲಿಕ್ಕೆ ಬಹು ಪ್ರಾಶಸ್ತ್ಯ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

error: Content is protected !!