ಸಿದ್ಧಗಂಗಾ ಶಾಲೆಯಲ್ಲಿ ನರ್ಸರಿ ಮಕ್ಕಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

ಸಿದ್ಧಗಂಗಾ ಶಾಲೆಯಲ್ಲಿ ನರ್ಸರಿ ಮಕ್ಕಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

ದಾವಣಗೆರೆ,  ಸೆ. 12 – ನೂರಾರು ರಾಧೆ-ಕೃಷ್ಣೆಯರು! ರಂಗು ರಂಗಿನ ಬಟ್ಟೆ ತೊಟ್ಟ ಪುಟಾಣಿಗಳು! ನೂರಾರು ಕೊಳಲಿನ ನಿನಾದ ಆವರಣದಲ್ಲಿ ಅನುರಣಿಸಿತು. 3, 4, 5 ವರ್ಷದ ಪುಟ್ಟ-ಪುಟ್ಟ ಹೆಜ್ಜೆಯ ಬಾಲ ಕೃಷ್ಣರು ಎಲ್ಲರ ಮನ ಸೂರೆಗೊಂಡರು. ಕೃಷ್ಣನ ಜೊತೆಗೆ ಗಡಿಗೆ ತುಂಬಾ ಬೆಣ್ಣೆ ತುಂಬಿಸಿಕೊಂಡು ಬಂದ ಮಿಂಚುವ ಪೋಷಾಕಿನ ರಾಧೆಯರು. ಸಿದ್ಧಗಂಗಾ ನರ್ಸರಿ ಶಾಲೆಯ ಅಂಗಳದ ತುಂಬಾ ಓಡಾಡಿದರು. ಪಾಲಕರು ಶ್ರದ್ಧೆಯಿಂದ ಈ ಮಕ್ಕಳಿಗೆ ವೇಷ-ಭೂಷಣ ತೊಡಿಸಿ ಕರೆ ತಂದಿದ್ದರು. ಪ್ರೀಕೆಜಿ, ಎಲ್‌ಕೆಜಿ, ಯುಕೆಜಿ ಮಕ್ಕಳ ಈ ಮಹಾ ಮೇಳಕ್ಕೆ ಪೂರಕವಾಗಿ ಹಿನ್ನೆಲೆಯಲ್ಲಿ ಕೃಷ್ಣನ ಕುರಿತು ಮಧುರವಾದ ಭಕ್ತಿಗೀತೆಗಳು ಪಾಲಕರನ್ನು ಪುಳಕಗೊಳಿಸಿತು. ಭಾಗವಹಿಸಿದ ಪ್ರತಿ ಮಗುವಿಗೂ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಶಿಕ್ಷಕ ವೃಂದದವರು ಸಂಭ್ರಮಿಸಿದರು. 

error: Content is protected !!