ರೇಣುಕಾಚಾರ್ಯ ಬಿಜೆಪಿಗೆ ಕಪ್ಪು ಚುಕ್ಕೆ: ವೀರೇಶ್ ಹನಗವಾಡಿ

ರೇಣುಕಾಚಾರ್ಯ ಬಿಜೆಪಿಗೆ  ಕಪ್ಪು ಚುಕ್ಕೆ: ವೀರೇಶ್ ಹನಗವಾಡಿ

ದಾವಣಗೆರೆ, ಸೆ. 11-  ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಬಿಜೆಪಿಗೆ ಕಪ್ಪು ಚುಕ್ಕೆ ಇದ್ದಂತೆ. ಪಕ್ಷದ ಮುಖಂಡರ ಬಗ್ಗೆ ತೇಜೋವಧೆ ಮುಂದುವರೆಸಿದರೆ, ಪಕ್ಷದ ಶಿಸ್ತುಪಾಲನಾ ಸಮಿತಿಗೆ ವರದಿ ನೀಡುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚಿನ ಬೆಳವಣಿಗೆ ಕುರಿತು ಮಾಹಿತಿ ನೀಡಲಾಗುವುದು. ಪಕ್ಷದಲ್ಲಿ ಯಾರ ಬಗ್ಗೆ ಆಗಲೀ ಶಿಸ್ತು ಕ್ರಮ ಕೈಗೊಳ್ಳುವುದು. ಪಕ್ಷದಿಂದ ಉಚ್ಛಾಟನೆ ಮಾಡಲು ರಾಜ್ಯ ಬಿಜೆಪಿ ಕ್ರಮ ಕೈಗೊಳ್ಳುತ್ತದೆ ಎಂದರು.

ರೇಣುಕಾಚಾರ್ಯರ ದ್ವಂದ್ವ ಹೇಳಿಕೆಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಪಕ್ಷ ವಿರೋಧಿ ಹೇಳಿಕೆಗಳ ಬಗ್ಗೆ ಕಾರ್ಯ ಕರ್ತರು ಗೊಂದಲಕ್ಕೀಡಾ ಗುವುದು ಬೇಡ ಎಂದು ಹೇಳಿದರು. ರೇಣುಕಾಚಾರ್ಯರ  ಹೇಳಿಕೆಗಳ ನ್ನು ಯಾರೂ ಕೂಡ ಗಂಭಿರವಾಗಿ ಪರಿಗಣಿಸದಿರಿ. ಕಾರ್ಯಕರ್ತರು ಬೂತ್, ತಾಲ್ಲೂಕು ಮಟ್ಟದಲ್ಲಿ ಪಕ್ಷ ಸಂಘಟನೆ ಕಡೆ ಗಮಹರಿಸು ವಂತೆ ಮನವಿ ಮಾಡಿದರು. ನೋಟೀ ಸ್‌ಗೆ ಉತ್ತರ ಕೊಡುವು ದಿಲ್ಲ ಎಂದು ರೇಣುಕಾಚಾರ್ಯ ಹೇಳಿರು ವುದು ಸಲ್ಲದು. ಬಿಜೆಪಿಯಲ್ಲಿ ಯಾರೂ ಸುಪ್ರೀಂ ಅಲ್ಲ. ರೇಣುಕಾ ಚಾರ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಘಟಕ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

error: Content is protected !!