ಹರಿಹರದಲ್ಲಿಂದು ಸತ್ಸಂಗ ಕಾರ್ಯಕ್ರಮ

ಶ್ರೀ ಗುರು ಬ್ರಹ್ಮಾನಂದ ಮಠದಲ್ಲಿ ಸತ್ಸಂಗ ಹಾಗೂ ಶ್ರೀ ಸಿದ್ಧಾರೂಢರ ಕಥಾಮೃತ ಶ್ರವಣದ ಮುಕ್ತಾಯ ಕಾರ್ಯಕ್ರಮ ಇಂದು ಸಂಜೆ 6 ಗಂಟೆಯಿಂದ ನಡೆಯಲಿದೆ. ಮುಪ್ಪಿನಾರ್ಯ ಭಜನಾ ಮಂಡಳಿ ಮತ್ತು ಶಿವಾನಂದಪ್ಪ ಮೌನೇಶ್ ಆಚಾರ್ ತಂಡದವರಿಂದ ಸಂಗೀತ ಕಾರ್ಯಕ್ರಮದ ನಂತರ ಸಂಜೆ 7 ರಿಂದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಪ್ರಿಯಾನಂದ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ದೇವಾಂಗದ್ ಗುರುಗಳು ಹಾಗೂ ಮಾತೋಶ್ರೀ ಗೀತಮ್ಮ ತಾಯಿಯವರಿಂದ ಪ್ರವಚನ ಕಾರ್ಯಕ್ರಮ ಜರುಗಲಿದೆ. 105ನೇ  ಸತ್ಸಂಗದ ಪ್ರಸಾದ ಸೇವೆಯನ್ನು ಶ್ರೀಮತಿ ಶಾಂತ ಮಂಜುನಾಥ್ ನಡೆಸಿಕೊಡಲಿದ್ದಾರೆ.

error: Content is protected !!