ಆನೆಕೊಂಡದಲ್ಲಿ ಇಂದು ಜಾತ್ರೆ, ಕಾರಣಿಕೋತ್ಸವ

ಆನೆಕೊಂಡದಲ್ಲಿ ಇಂದು ಜಾತ್ರೆ, ಕಾರಣಿಕೋತ್ಸವ

ಶ್ರೀ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕಡೇ ಸೋಮವಾರವಾದ ಇಂದು ಸಂಜೆ 4 ಗಂಟೆಗೆ ಶ್ರೀ ಬಸವೇಶ್ವರ ಮತ್ತು ನೀಲಾನಹಳ್ಳಿಯ  ಶ್ರೀ ಆಂಜನೇಯ ಸ್ವಾಮಿ ಹಾಗೂ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ಮತ್ತು ಸುತ್ತಮುತ್ತಲಿನ ದೇವರುಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆ ಯಿಂದ ಮೆರವಣಿಗೆ ನಡೆದು ನಂತರ ಸಂಜೆ 6 ಗಂಟೆಗೆ ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರೋತ್ಸವ ಮತ್ತು ಕಾರಣಿ ಕೋತ್ಸವ ಜರುಗಲಿದೆ ಎಂದು ದೇವಸ್ಥಾನದ ಕನ್ವೀನರ್  ಗೌಡ್ರು ಅಜ್ಜಪ್ಪ ತಿಳಿಸಿದ್ದಾರೆ.

error: Content is protected !!