ಹರಿಹರ : ಬೆಳ್ಳೂಡಿಗೆ ಬಸ್ ಸೌಲಭ್ಯಕ್ಕಾಗಿ ಮನವಿ

ಹರಿಹರ : ಬೆಳ್ಳೂಡಿಗೆ  ಬಸ್ ಸೌಲಭ್ಯಕ್ಕಾಗಿ ಮನವಿ

ಹರಿಹರ, ಸೆ. 6 – ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ವತಿಯಿಂದ ಬೆಳ್ಳೂಡಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹರಿಹರ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ಬೆಳ್ಳೂಡಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ   ಕಡಿಮೆ ಬಸ್ ಸಂಚಾರ ಇದ್ದು, ಈ ಭಾಗದಿಂದ ದಿನನಿತ್ಯ ಪ್ರಯಾಣಿಸುವ 150 ಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9.10 ಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಸ್. ಗೋವಿಂದ್, ಉಪಾಧ್ಯಕ್ಷ ಆನಂದ್ ಎಂ. ಆರ್., ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಸಿ.ಹೆಚ್., ಖಜಾಂಚಿ ಶಬರೀಶ್ ಮತ್ತು ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀನಿವಾಸ್, ಕಾರ್ತಿಕ್ ಸುದೀಪ್, ರಾಜು, ಮಹಾರುದ್ರ, ಹರೀಶ್, ನಯನ, ನಂದಿನಿ, ಜ್ಯೋತಿ, ಕೆ.ಪಿ ಪಲ್ಲವಿ, ಎಂ.ಎಂ ಚೈತ್ರ ಮೇಘನ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!