ಶಿಕ್ಷಕ ಅಜಯ್ ನಾರಾಯಣ ಅವರಿಗೆ ಲಯನ್ಸ್ ಸನ್ಮಾನ

ಶಿಕ್ಷಕ ಅಜಯ್ ನಾರಾಯಣ ಅವರಿಗೆ ಲಯನ್ಸ್ ಸನ್ಮಾನ

ದಾವಣಗೆರೆ,ಸೆ.5- ನಗರದ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಭವನದಲ್ಲಿ ಇಂದು ಏರ್ಪಾಡಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರೂ, ಪ್ರತಿಭಾನ್ವಿತ ಗಾಯಕರೂ, ಸಂಪನ್ಮೂಲ ವ್ಯಕ್ತಿಗಳೂ ಆದ ಸಿ. ಅಜಯ್ ನಾರಾಯಣ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.  ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ನೀಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್, ಲಯನ್ಸ್ ಮಾಜಿ ಅಧ್ಯಕ್ಷರುಗಳಾದ ಆರ್.ಜಿ. ಶ್ರೀನಿವಾಸಮೂರ್ತಿ, ಟಿ.ಎಂ. ಪಂಚಾಕ್ಷರಯ್ಯ, ಬೆಳ್ಳೂಡಿ ಶಿವಕುಮಾರ್, ಕಾರ್ಯದರ್ಶಿ ಭೀಮಾನಂದ ಶೆಟ್ಟಿ, ಖಜಾಂಚಿ ಟಿ.ಮಹಾಲಿಂಗೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!