ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಗುರುವಂದನಾ ಕಾರ್ಯಕ್ರಮ

ದಾವಣಗೆರೆ,ಸೆ.4- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ವೇದಿಕೆಯಿಂದ ನಾಳೆ ದಿನಾಂಕ 5ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ `ಗುರು ವಂದನಾ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಳೆಯ ವಿದ್ಯಾರ್ಥಿ, ಉದ್ಯಮಿ ಕೆ.ಬಿ. ಅನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದುವರೆಗೂ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುವ 15 ಗುರುಗಳು ಸೇರಿದಂತೆ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಪ್ರಾಧ್ಯಾಪಕರನ್ನು ಸನ್ಮಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಲಿಂಗೇಶ ಬಿದರಕುಂದಿ, ಎಂ.ಬಿ. ಸುಭಾಶ್ಚಂದ್ರ, ಜೆ. ವಿಶ್ವನಾಥ್, ಸತೀಶ್ ಸಾಳಂಕಿ, ಕೆ.ಜಿ. ಶ್ರೀಶೈಲ ಕುಮಾರ, ಪತ್ರಕರ್ತ ವೀರನಗೌಡ ಪಾಟೀಲ ಮತ್ತಿತರರಿದ್ದರು. 

error: Content is protected !!