ಉಚಿತ ಯೋಜನೆಗಳಿಂದ ಜನರಿಗೆ ಆಸರೆ ದೊರೆತಿದೆ : ನಂದಿಗಾವಿ ಶ್ರೀನಿವಾಸ್

ಉಚಿತ ಯೋಜನೆಗಳಿಂದ ಜನರಿಗೆ ಆಸರೆ ದೊರೆತಿದೆ : ನಂದಿಗಾವಿ ಶ್ರೀನಿವಾಸ್

ಹರಿಹರ, ಸೆ. 4 – ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳಿಂದ ರಾಜ್ಯದಲ್ಲಿ ಕಂಗಾ ಲಾಗಿರುವ ಜನತೆಗೆ ಆಸರೆ ದೊರೆತಿದೆ ಎಂದು ಕಾಂಗ್ರೆಸ್ ಮುಖಂಡ ಹಾಗು ಪರಾಜಿತ ಅಭ್ಯರ್ಥಿ ಎನ್.ಎಚ್. ಶ್ರೀನಿವಾಸ್ ನಂದಿಗಾವಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜೆಸಿ ಬಡಾವಣೆಯಲ್ಲಿರುವ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದ 5 ಗ್ಯಾರಂಟಿಗಳಲ್ಲಿ 4 ಜಾರಿಗೆ ತರಲಾಗಿದೆ ಎಂದರು. ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಜನರ ಬದುಕನ್ನು ಕಂಗೆಡಿಸಿರುವ ಇಂತಹ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಆಸರೆಯಾಗಿವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಕೆ.ಜಿ. ಸಿದ್ದೇಶ್, ನಗರಸಭೆ ಮಾಜಿ ಅಧ್ಯಕ್ಷ ಹಾಗು ಹಿರಿಯ ಸದಸ್ಯ ಶಂಕರ್ ಖಟಾವ್ಕರ್, ಮಾಜಿ ಉಪಾಧ್ಯಕ್ಷ ಹಾಗು ಸದಸ್ಯ ಎಂ.ಎಸ್.ಬಾಬುಲಾಲ್, ನಗರಸಭೆ ಸದಸ್ಯ ಸೈಯದ್ ಅಬ್ದುಲ್ ಅಲಿಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಲ್.ಬಿ.ಹನುಮಂತಪ್ಪ, ಎಂ.ಬಿ. ಅಭಿದಾಲಿ, ಕಾಂಗ್ರೆಸ್ ಮುಖಂಡರುಗಳಾದ ಸನಾವುಲ್ಲಾ ದಾದಾಪೀರ್ ಭಾನುವಳ್ಳಿ ಸಂತೋಷ್ ನೋಟದವರ ಕಿರಣ್ ಭೂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!