ನಂದಗೋಕುಲ ವಿದ್ಯಾರ್ಥಿಗಳಿಗೆ ಶಿಬಿರ

ನಂದಗೋಕುಲ ವಿದ್ಯಾರ್ಥಿಗಳಿಗೆ ಶಿಬಿರ

ದಾವಣಗೆರೆ, ಆ. 31- ಶ್ರೀ ಮಾತಾ ವಿದ್ಯಾಸಂಸ್ಥೆ ನಂದಗೋಕುಲ ನರ್ಸರಿ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಾಗಾರದಲ್ಲಿ ಜೈನ ಸಮಾಜದ ಶ್ರೀ ಆಚಾರ್ಯ ಅಜಿತ್ ಶೇಖರ್ ಸುರೂಜಿ ಹಾಗೂ ಮುನಿರಾಜ ಫಲಾವುದ್ದಿ ಶೇಖರ್‌ ಜೀ ಅವರು ಉಪಸ್ಥಿತರಿದ್ದು,  ಆರೋಗ್ಯವಂತ ಮನಸ್ಸನ್ನು ಹೇಗೆ ವಿದ್ಯಾಭ್ಯಾಸದಲ್ಲಿ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿಕೊಟ್ಟರು.

 ಶಾಲೆಯ ಕಾರ್ಯದರ್ಶಿಗಳಾದ ಶ್ರೀಮತಿ ಬಿ. ಅನಸೂಯ, ಮುಖ್ಯ ಶಿಕ್ಷಕಿ ರೆಹಾನ ಬಾನು ನಾಸಿಕ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!