ಭಾವಸಾರ ಕ್ಷತ್ರೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ದಾವಣಗೆರೆ, ಆ.31- ದಾವಣಗೆರೆ ಭಾವಸಾರ ವಿಷನ್‌ ಎಜುಕೇಷನ್‌ ಟ್ರಸ್ಟ್‌ ವತಿಯಿಂದ ಭಾವಸಾರ ಕ್ಷತ್ರೀಯ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಎಸ್ಸೆಸ್ಸೆಲ್ಸಿ ಹಾಗೂ ಎರಡನೇ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್‌ ಕೊಡಲಾಗುವುದು.

ಭಾವಸಾರ ಕ್ಷತ್ರೀಯ ಸಮಾಜದ ವಿದ್ಯಾರ್ಥಿಗಳು ವಿಠ್ಠಲ ಮಂದಿರ, ಮಹಾರಾಜಪೇಟೆ ಅಥವಾ ನವಲೆ ಅಪೆರೆಲ್ಸ್‌, ಪ್ರವಾಸಿ ಮಂದಿರ ರಸ್ತೆ ಇವರಲ್ಲಿ ದಿನಾಂಕ 11ರ ಸೆಪ್ಟೆಂಬರ್‌ ಒಳಗೆ ಅರ್ಜಿಯನ್ನು ಪಡೆದು ದಿನಾಂಕ 13 ರ ಸೆಪ್ಟೆಂಬರ್‌ ಒಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ಭಾವಸಾರ ವಿಜನ್‌ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ವಾಗೀಶ್‌ಬಾಬು ಗುಜ್ಜರ್‌ (94483 39383) ತಿಳಿಸಿದ್ದಾರೆ.

error: Content is protected !!