ಹರಿಹರ, ಆ.31 – ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ ನಗರದ ತುಂಗಭದ್ರಾ ನದಿಯ ತುಂಗಾರತಿ ಸ್ಥಳದಲ್ಲಿ, ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನದಿಗೆ ಬಾಗಿನ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಎಸ್. ಕೇರ್ ಟ್ರಸ್ಟ್ ಅಧ್ಯಕ್ಷರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಸಮಾಜದ ಮುಖಂಡರಾದ ಬಿ.ಸಿ. ಉಮಾಪತಿ, ಪ್ರಕಾಶ್ ಪಾಟೀಲ್, ಚಂದ್ರಶೇಖರ್ ಪೂಜಾರ್, ರಶ್ಮಿ ಕುಂಕೋದ್, ಮಂಗಳಗೌರಿ ಅರುಣ್ ಕುಮಾರ್, ವಸಂತ ಹುಲ್ಲತ್ತಿ, ಕರಿಬಸಪ್ಪ ಕಂಚಿಕೇರಿ, ಶಿವಣ್ಣ ಬಾತಿ ರವಿಕುಮಾರ್, ಚಂದ್ರು ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.