ಚನ್ನಗಿರಿಯಲ್ಲಿ ಇಂದು ಶ್ರಾವಣ ಕವಿ ಗೋಷ್ಠಿ

ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಚನ್ನಗಿರಿ ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಶ್ರಾವಣ ಕವಿ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಸಿ.ವಿ.ತಿರುಮಲರಾವ್, ಕಸಾಪ ತಾಲ್ಲೂಕು ಅಧ್ಯಕ್ಷ ಎಲ್.ಜಿ.ಮಧುಕುಮಾರ್, ನಿಕಟಪೂರ್ವ ಅಧ್ಯಕ್ಷ ಎಂ.ಯು.ಚನ್ನಬಸಪ್ಪ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಜಿ.ಚಿನ್ನಸ್ವಾಮಿ, ಪ್ರಾಂಶುಪಾಲ ಎಂ.ಎಸ್.ಬಸವನಗೌಡ, ಕೋಶಾಧ್ಯಕ್ಷ ಬಿ.ಇ. ಸಿದ್ದಪ್ಪ, ಕವಿಗಳಾದ ಎಂ.ಅಣ್ಣೋಜಿರಾವ್ ಪವಾರ್, ನಾಗೇಶನಾಯ್ಕ್, ಕಶ್ಯಪ್ ಚನ್ನಗಿರಿ, ಕಗತೂರು ಮಲ್ಲಿಕಾರ್ಜುನ್, ಸಿದ್ದೇಶ್ ಹಿರೇಮಠ ಭಾಗವಹಿಸಲಿದ್ದಾರೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಲ್.ಜಿ.ಮಧುಕುಮಾರ್  ತಿಳಿಸಿದ್ದಾರೆ.

error: Content is protected !!