ದಾವಣಗೆರೆ, ಆ. 29- ಶ್ರೀ ಶಂಕರ ಸೇವಾ ಸಂಘದ ವತಿಯಿಂದ ನಿತ್ಯ ಮತ್ತು ನೂತನ ಋಗ್ವೇದ ಉಪಾಕರ್ಮವನ್ನು ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಂಕರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿತ್ತು. 10 ನೂತನ ವಟುಗಳು ಮತ್ತು ಐವತ್ತಕ್ಕೂ ಹೆಚ್ಚು ಬ್ರಾಹ್ಮಣರು ಉಪಾಕರ್ಮದಲ್ಲಿ ಪಾಲ್ಗೊಂಡಿದ್ದರು. ವೇದಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಿಗಳ ಶಿಷ್ಯಂದಿರುಗಳಾದ ಪುಟ್ಟಸ್ವಾಮಿ, ರಾಮಕೃಷ್ಣರಾವ್ ಉಪಾಕರ್ಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀನಿವಾಸ್ ಕೆ. ಜೋಷಿ, ಸುಬ್ಬಣ್ಣ (ಮಂಡಕ್ಕಿ), ರಮೇಶ್ ಪಾಟೀಲ್, ದೇವಸ್ಥಾನದ ಪುರೋಹಿತರುಗಳಾದ ಗಣೇಶ್ ಭಟ್, ರಾಮಚಂದ್ರ ಉಪಸ್ಥಿತರಿದ್ದರು.