ಎಂಪಿ ಚುನಾವಣೆಯಲ್ಲಿ ದಲಿತರು, ಪ್ರಗತಿಪರರು ಒಂದಾಗಲಿ

ಎಂಪಿ ಚುನಾವಣೆಯಲ್ಲಿ ದಲಿತರು, ಪ್ರಗತಿಪರರು ಒಂದಾಗಲಿ

ಹನಗವಾಡಿ ಸಮೀಪದ ಮೈತ್ರಿ ವನದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆಶಯ

ಹರಿಹರ, ಆ. 27 – 2024ರ ಲೋಕಸಭಾ ಚುನಾವಣೆ ಎಂಬ ಮಹಾಕದನದಲ್ಲೂ ದಲಿತರು, ಪ್ರಗತಿಪರರು ಒಂದಾಗಿ ದೇಶದಲ್ಲೂ ರಾಜಕೀಯ ಬದಲಾವಣೆ ತರಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

ತಾಲ್ಲೂಕಿನ ಹನಗವಾಡಿ ಸಮೀಪದ ಮೈತ್ರಿ ವನದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯಿಂದ ಭಾನುವಾರ ಆಯೋಜಿ ಸಿದ್ದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರದ ಸಮಾರೋ ಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬುಧ್ಧ, ಬಸವ, ಡಾ.ಅಂಬೇಡ್ಕರ್, ಸಾವಿತ್ರಿಬಾ ಫುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್ , ಕುವೆಂಪು, ಪ್ರೊ.ಬಿ.ಕೃಷ್ಣಪ್ಪರಂತಹ ಮಹನೀಯರು ವೈದಿಕ ಸಿದ್ದಾಂತದ ವಿರುದ್ಧ ಧ್ವನಿ ಎತ್ತಿದರು. ಅಂತಹವರ ಧ್ವನಿಯನ್ನು ನಮ್ಮ ಧ್ವನಿಯಾಗಿಸಿ ದಲಿತ ಹೋರಾಟ, ಚಳವಳಿಗಳನ್ನು ರೂಪಿಸಿ ಜಾಗೃತಿ ಮೂಡಿಸಬೇಕಿದೆ ಎಂದರು.

ದಲಿತರ ಜಾಗೃತಿಯಿಂದಾಗಿ ರಾಜ್ಯದಲ್ಲಿ ರಾಜಕೀಯ ಬದಲಾವಣೆ ತರಲಾಗಿದೆ. ಎನ್‍ಆರ್‍ಸಿ, ಸಿಎಎಯಂತಹ ಕಾನೂನು ಹಿಡಿದು ದೇಶ ವಾಸಿಗಳಲ್ಲಿ ಭಯ ಮೂಡಿಸಿರುವ ಸರ್ಕಾರಕ್ಕೆ ಸೂಕ್ತ ಉತ್ತರ ನೀಡುವ ಕಾಲ ಬಂದಿದೆ ಎಂದರು.

ಮುಖ್ಯಮಂತ್ರಿಯವರ ಆಪ್ತ ಸಹಾಯಕ ಡಾ.ವೆಂಕಟೇಶ್ ನೆಲ್ಲುಕುಂಟೆ ಮಾತನಾಡಿ, ಕಳೆದ 20 ವರ್ಷಗಳಿಂದ ದೇಶದಲ್ಲಿ ಬಟ್ಟೆ, ಊಟ, ಸಾಮಾನ್ಯ ಮಟ್ಟದ ಶಿಕ್ಷಣ ಸಿಗುತ್ತಿದೆ, ಇದು ದೊಡ್ಡ ಬದಲಾವಣೆಯಾಗಿದೆ. ಆದರೆ ಗುಣ ಮಟ್ಟದ ಶಿಕ್ಷಣದಿಂದ ಈಗಲೂ ಬಡವರು ವಂಚಿ ತರಾಗಿದ್ದಾರೆ. ಬರೆಯಲು ಬಾರದಿರುವ ಕೆಲವರು ನಮ್ಮ ವಿ.ವಿ.ಗಳಲ್ಲಿ ಅಧ್ಯಾಪಕರಾಗಿದ್ದಾರೆ. ಇಂತಹ ವರಿಂದ ನಮ್ಮ ಮಕ್ಕಳು ಯಾವ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ ಎಂದು ಪ್ರಶ್ನಿಸಿದರು.

ಜ್ಞಾನವೊಂದೇ ನಮಗೆ ಕಾಪಾಡಲು ಸಾಧ್ಯ, ಇದನ್ನು ಡಾ.ಅಂಬೇಡ್ಕರ್‍ರವರು ಒತ್ತಿ ಹೇಳಿದ್ದರು. ಹೀಗಾಗಿ ಗುಣಮಟ್ಟದ ಶಿಕ್ಷಣ ಬೇಕು, ಆಗ ಮಾತ್ರ ದೀಪದಿಂದ ದೀಪ ಹಚ್ಚಬಹುದು. ಎಲ್ಲಾ ಭಾರತೀಯರಿಗೂ ಜ್ಞಾನದ ಹರಿವು ಆಗಬೇಕೆಂದರೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂದರು.

ಬೆಂಗಳೂರಿನ ಜಿನ್ನಿ, ಗೊಲ್ಲಹಳ್ಳಿ ಶಿವಪ್ರಸಾದ್, ಡಿಂಗ್ರಿ ಭರತ್, ದೊಡ್ಮಲೆ ರವಿ ತಾಂಡದ ಹಾಡುಗಳು ಜನಮನ ಸೆಳದವು. ಮೈತ್ರಿವನದ ಟ್ರಸ್ಟ್‍ನ ಟ್ರಸ್ಟಿ ರುದ್ರಪ್ಪ ಹನಗವಾಡಿ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ, ನಾಗಣ್ಣ ಬಡಿಗೇರ್, ದಸಂಸ ಜಿಲ್ಲಾ ಸಂಚಾಲಕ ಬಿ.ದುಗ್ಗಪ್ಪ, ನಾಗಪ್ಳರ ಮಂಜುನಾಥ, ನಿವೃತ್ತ ಐಎಎಸ್ ಅಧಿಕಾರಿ ಈ.ವೆಂಕಟಯ್ಯ, ನಾಗರಾಜ್ ರಾಚಪ್ಪ, ರಾಯಚೂರಿನ ನಾಗರಾಜ್, ಬೆಂಗಳೂರಿನ ನಿರ್ಮಲ, ಸಂತೋಷ್ ನೋಟದವರ್, ರಾಜನಹಳ್ಳಿ ಮಂಜಪ್ಪ ಜಿ.ಎಂ., ಮಂಜುನಾಥ ಎಂ. ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಪದಾಧಿಕಾರಿಗಳಿದ್ದರು.

error: Content is protected !!