ಲಕ್ಕಶೆಟ್ಟಿಹಳ್ಳಿ : ಮಾಚಿದೇವ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ನೆರವು

ಲಕ್ಕಶೆಟ್ಟಿಹಳ್ಳಿ : ಮಾಚಿದೇವ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ನೆರವು

ಮಲೇಬೆನ್ನೂರು, ಆ.25- ಲಕ್ಕಶೆಟ್ಟಿಹಳ್ಳಿಯ ಶ್ರೀ ಗುರು ವೀರ ಮಡಿವಾಳ ಮಾಚಿದೇವ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದ 1 ಲಕ್ಷ ರೂ. ಗಳ ಡಿಡಿಯನ್ನು ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ಅವರು ಬುಧವಾರ ದೇವಸ್ಥಾನ ಸಮಿತಿಯವರಿಗೆ ಹಸ್ತಾಂತರಿಸಿದರು.

ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಲೋಕಿಕೆರೆ ಅಣ್ಣಪ್ಪ, ಯಲವಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಕರಿಬಸಮ್ಮ ಮಲ್ಲಿಕಾರ್ಜುನಪ್ಪ ಮಾತನಾಡಿ, ಧರ್ಮಸ್ಥಳ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಲೇಬೆನ್ನೂರಿನ ಯೋಜನಾಧಿಕಾರಿ ವಸಂತ್ ದೇವಾಡಿಗ, ಸಮಿತಿಯ ಖಜಾಂಚಿ ಕೆ.ಕೆ. ನಿಂಗರಾಜ್, ಮುಖಂಡರಾದ ಸಾರಥಿ ಯಶವಂತ್, ನಂದಿಗಾವಿ ರಂಗಪ್ಪ, ಷಣ್ಮುಖಪ್ಪ, ಆರ್. ಚಂದ್ರಪ್ಪ, ಬಿ.ಎನ್. ಮಂಜುನಾಥ್, ಬಿಳಸನೂರು ಚಂದ್ರಪ್ಪ, ಮಾಷ್ಠಿ ಮಂಜಪ್ಪ, ತಳವಾರ್ ಅಜ್ಜಗಪ್ಪ, ಎಂ.ಸಿ. ಗುಳ್ಳೆಪ್ಪ, ದೊಡ್ಡಜ್ಜಿ ಮಲ್ಲೇಶ್, ಮಾಷ್ಠಿ ವಿಜಯ್, ಹೊಳೆಸಿರಿಗೆರೆ ವಲಯ ಮೇಲ್ವಿಚಾರಕಿ ಸಂತೋಷಿನಿ, ಸೇವಾ ಪ್ರತಿನಿಧಿಗಳಾದ ಲತಾ ಇಟಗಿ, ಸುನೀತಾ ಇಟಗಿ, ಲತಾ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!