ರಾಣೇಬೆನ್ನೂರಿನಲ್ಲಿ ಇಂದು ಜಿಲ್ಲಾ ನೇಕಾರ ಒಕ್ಕೂಟದ ಸಭೆ

ಜಿಲ್ಲಾ ನೇಕಾರ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಹಿನ್ನಲೆಯಲ್ಲಿ  ಇಂದು ಮಧ್ಯಾಹ್ನ 3.30ಕ್ಕೆ ಶ್ರೀ ತುಳಜಾಭವಾನಿ ದೇವ ಸ್ಥಾನದ ಸಭಾ ಭವನದಲ್ಲಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಬಗಾದಿ ತಿಳಿಸಿದ್ದಾರೆ. ಸಭೆಗೆ ನೇಕಾರ ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ, ಪ್ರಧಾನ ಕಾರ್ಯದರ್ಶಿ ರಾಘು ಶೆಟ್ಟಿಗಾರ, ಉಪಾಧ್ಯಕ್ಷ ರವೀಂದ್ರ ಕಲುಬುರ್ಗಿ, ಕಾರ್ಯದರ್ಶಿ ಡಾ. ಬಸವರಾಜ ಕೇಲಗಾರ, ತೋಟಪ್ಪ ಶೇಖ, ನವೀನ ಚಿಲ್ಲಾಳ ಆಗಮಿಸುವರು. ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕ್ರಣ್ಣ ನ್ಯಾಮತಿ ಸಭೆಯ ಅಧ್ಯಕ್ಷತೆ ವಹಿಸುವರು. 

error: Content is protected !!