ಎನ್.ಇ.ಪಿ. ರದ್ದತಿಗೆ ಆಗ್ರಹ

ಎನ್.ಇ.ಪಿ. ರದ್ದತಿಗೆ ಆಗ್ರಹ

ಜಗಳೂರಿನಲ್ಲಿ ಪ್ರಗತಿ ಪರ ವಿದ್ಯಾರ್ಥಿ ಸಂಘಟನೆ‌ ಪ್ರತಿಭಟನೆ

ಜಗಳೂರು, ಆ.24- ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶೀಘ್ರವೇ  ರದ್ದುಪಡಿಸಲು‌ ಆಗ್ರಹಿಸಿ‌ ಪ್ರಗತಿ ಪರ ವಿದ್ಯಾರ್ಥಿ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿ ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿ ಲಿಖಿತ ಮನವಿ ಸಲ್ಲಿಸಿದರು.

ದಲಿತ ವಿದ್ಯಾರ್ಥಿ ಒಕ್ಕೂಟದ ತಾಲ್ಲೂಕು ಸಂಚಾಲಕ ಅಸಗೋಡು ಶಿವಕುಮಾರ್ ಮಾತನಾಡಿ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶ ನೀಡಬೇಕು. ಪದವಿ ಕಾಲೇಜುಗಳಲ್ಲಿ ಕ್ಯಾರಿ ಓವರ್ ಸಿಸ್ಟಮ್ ನಡಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದ  ವ್ಯಾಸಂಗದಲ್ಲಿ ಬಡ್ತಿಗೆ ಅವಕಾಶವಿದೆ.

ಅಂತಿಮ ವರ್ಷದ ವಿದ್ಯಾರ್ಥಿಗಳು ಎರಡ ಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾದವರಿಗೆ ಮರುಪರೀಕ್ಷೆ ನಡೆಸಬೇಕು. ದೇಶದಲ್ಲಿ ಯುಜಿಸಿ‌ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿ ಸಬೇಕು.ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಇರುವ ಅವಕಾಶದಂತೆ ದಾವಣಗೆರೆ ವಿಶ್ವವಿದ್ಯಾನಿಲಯ ಅನುಸರಿಸಬೇಕು ಎಂದು ಒತ್ತಾಯಿಸಿದರು.

ಸಂದರ್ಭದಲ್ಲಿ ಡಿಎಸ್ಎಸ್ ತಾಲ್ಲೂಕು ಸಂಚಾಲಕ ಸತೀಶ್, ದಲಿತ ವಿದ್ಯಾರ್ಥಿ ಒಕ್ಕೂಟದ  ಜೀವನ್, ಎಸ್.ಎಫ್.ಐ ಜಿಲ್ಲಾ ಸಂಚಾಲಕ ಅನಂತರಾಜ್, ಎಐಎಸ್ ಎಫ್ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಮಂಜಪ್ಪ, ಎಐಎಸ್ಎಫ್ ಮುಖಂಡರಾದ ಮಧು ದೇವಿಕೆರೆ, ಕಿರಣ್, ಲಿಂಗಣ್ಣಹಳ್ಳಿ ಮಂಜುನಾಥ್, ವಿವೇಕಾನಂದ, ಅಜಯ್, ಕಾರ್ತಿಕ, ರಾಕೇಶ್, ಗುರು, ತಿಮ್ಮಣ್ಣ ಸೇರಿದಂತೆ‌ ಇತರರು ಇದ್ದರು.

error: Content is protected !!