ವರಮಹಾಲಕ್ಷ್ಮಿಹಬ್ಬದ ಸಂಭ್ರಮಕ್ಕೆ ಖರೀದಿ

ವರಮಹಾಲಕ್ಷ್ಮಿಹಬ್ಬದ ಸಂಭ್ರಮಕ್ಕೆ ಖರೀದಿ

ದಾವಣಗೆರೆ, ಆ. 24- ಇಂದು ಶ್ರಾವಣ ಮಾಸದ ಶುಕ್ರವಾರ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿಕೊಂಡಿದ್ದರು.

ನಗರದ ಗಡಿಯಾರ ಕಂಬ, ಕೆ.ಆರ್. ಮಾರುಕಟ್ಟೆ, ಪಿ.ಬಿ. ರಸ್ತೆ ಸೇರಿದಂತೆ ಮುಂತಾದ ಕಡೆ  ಬೆಲೆ ಏರಿಕೆಯ ನಡುವೆಯೂ ಖರೀದಿಯ ಭರಾಟೆ ಹೆಚ್ಚಾಗಿತ್ತು. ಈ ಬಾರಿ ಬಾಳೆ ಹಣ್ಣಿನ ದರ ಹೆಚ್ಚಾಗಿರುವುದು ಜನತೆಗೆ ನುಂಗಲಾರದ ತುತ್ತಾಗಿದೆ. ಜೊತೆಗೆ ಹಣ್ಣು, ಹೂವಿನ ದರ ಏರಿಕೆಗೆ ಲಕ್ಷ್ಮೀ ಭಕ್ತರು ಹೈರಾಣಾಗಿದ್ದಾರೆ. ಆದಾಗ್ಯೂ ಸಂಭ್ರಮದ ಹಬ್ಬಕ್ಕೆ ಸಜ್ಜಾಗಿದ್ದಾರೆ.

error: Content is protected !!