ಶ್ರೀ ಕೊಟ್ಟೂರೇಶ್ವರ ಸ್ವಾಮಿಗೆ ತ್ರಿವರ್ಣ ವಸ್ತ್ರಗಳಿಂದ ಅಲಂಕಾರ

ಶ್ರೀ ಕೊಟ್ಟೂರೇಶ್ವರ ಸ್ವಾಮಿಗೆ ತ್ರಿವರ್ಣ ವಸ್ತ್ರಗಳಿಂದ ಅಲಂಕಾರ

ಕೊಟ್ಟೂರು, ಆ. 15- 77ನೇ ಸ್ವಾತಂತ್ರ ದಿನೋತ್ಸವದ ನಿಮಿತ್ಯ ಆರಾಧ್ಯ ದೈವ ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯನ್ನು ತ್ರಿವ ರ್ಣ ಧ್ವಜದ ಸಂಕೇತವಾದ ಕೇಸರಿ, ಬಿಳಿ, ಹಸಿರು ವಸ್ತ್ರಗಳಿಂದ ಪೂಜಾ ಕರ್ತರು ಅಲಂಕರಿಸಿ, ವಿಶೇಷ ಪೂಜೆ ಯನ್ನು ಮಂಗಳವಾರ ನೆರವೇರಿಸಿದರು.

ಶ್ರೀ ಸ್ವಾಮಿಯನ್ನು ರಾಷ್ಟ್ರೀಯ ಹಬ್ಬದ ದಿನಗಳಂದು ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸುವುದನ್ನು ರೂಢಿ ಮಾಡಿಕೊಂಡಿರುವ ಕೊಟ್ಟೂರೇಶ್ವರ ಸ್ವಾಮಿಯ ಪೂಜಾಕರ್ತರು ಮಂಗಳವಾರದಂದು ಕೇಸರಿ, ಬಿಳಿ, ಹಸಿರು ವಸ್ತ್ರಗಳಿಂದ ಅಲಂಕರಿಸಿದ್ದು ರಾಷ್ಟ್ರ ಪ್ರೇಮಿಗಳಾದ ಪ್ರತಿಯೊಬ್ಬರನ್ನು ಆಕರ್ಷಿಸಿತು. ಈ ರೀತಿ ಅಲಂಕೃತ ಗೊಂಡ ಶ್ರೀ ಸ್ವಾಮಿಯ ದರ್ಶನವನ್ನು ಭಕ್ತರು ಪಡೆದುಕೊಂಡು ನಮಿಸಿ, ಸಂಭ್ರಮಿಸಿದರು.

error: Content is protected !!