ವಿಶೇಷ ಪೂಜೆ ಸಲ್ಲಿಸಿದ ಶಾಸಕ ಡಿ.ಜಿ.ಶಾಂತನಗೌಡ
ನ್ಯಾಮತಿ, ಜು.13- ತಾಲ್ಲೂಕಿನ ಕೋಡಿಕೊಪ್ಪ ಗ್ರಾಮದ ಮುರುಡು ಬಸವೇಶ್ವರ ದೇಗುಲದಲ್ಲಿ ಆಷಾಡ ಮಾಸದ ಮೂರನೇ ಶನಿವಾರ ಶಾಸಕ ಡಿ.ಜಿ.ಶಾಂತನಗೌಡ ಪೂಜೆ ಸಲ್ಲಿಸಿದರು. ಹೊನ್ನಾಳಿ ಎಂ. ಎಸ್. ಶಾಸ್ತ್ರಿ ಹೊಳೆಮಠ ಅವರ ನೇತೃತ್ವದಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಾಧು ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಜಿ.ಶಿವಪ್ಪ, ರೈತ ಸಂಘದ ಶಿವಪ್ಪ, ಕೆ.ವೈ.ಯೋಗೇಶಪ್ಪ, ಚನ್ನಪ್ಪ ಎಸ್., ಬಸವರಾಜಪ್ಪ ಮಾಸ್ತರ್, ಮುರುಡಪ್ಪ, ಮಲ್ಲಿಕಾರ್ಜುನ್, ಹಾಲೇಶ್, ಚೆನ್ನೇಶ್, ನ್ಯಾಮತಿಯ ನುಚ್ಚಿನ್ ವಾಗೀಶ್ , ಲೋಕೇಶ್ ಗುಂಡೂರು , ಮಲ್ಲಿಕಾರ್ಜುನ ಕುಂಬಾರ್, ಡಿ.ಎಸ್.ಸುರೇಂದ್ರಗೌಡ, ಷಣ್ಮುಖಪ್ಪ ವಾಲ್ಮೀಕಿ, ಡಿ.ಎಸ್. ಕರಿಬಸಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.