ನಾಗರಸನಹಳ್ಳಿಯಲ್ಲಿ ಎಸ್‌ಬಿಸಿ ಮಹಿಳಾ ಕಾಲೇಜಿನಿಂದ ಎನ್‌ಎಸ್‌ಎಸ್‌ ಶಿಬಿರ

ನಾಗರಸನಹಳ್ಳಿಯಲ್ಲಿ ಎಸ್‌ಬಿಸಿ ಮಹಿಳಾ ಕಾಲೇಜಿನಿಂದ ಎನ್‌ಎಸ್‌ಎಸ್‌ ಶಿಬಿರ

ದಾವಣಗೆರೆ, ಮೇ 26 – ದಾವಣಗೆರೆ ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಹಾಗೂ ಶ್ರೀ ವಿನಾಯಕ ಎಜುಕೇಷನ್‌ ಟ್ರಸ್ಟ್‌ನ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು (ಎಸ್‌ಬಿಸಿ) ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಿಂದ ನಾಗರಸನಹಳ್ಳಿ ಗ್ರಾಮದಲ್ಲಿ ಎನ್‌ಎಸ್ಎಸ್‌ ಶಿಬಿರದ ಉದ್ಘಾಟನೆ ನಡೆಯಿತು.

ಎಸ್‌.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಧ್ಯಕ್ಷ ಬಿ.ಸಿ. ಉಮಾಪತಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ದಾವಿವಿ ರಾ.ಸೇ.ಯೋ.  ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಅಶೋಕ್‌ಕುಮಾರ್ ವಿ. ಪಾಳೇದ, ಎಸ್‌.ಬಿ.ಸಿ.ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯ ಡಾ. ಕೆ. ಷಣ್ಮುಖ, ಕುಕ್ಕುವಾಡ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಕೆ.ವೈ. ಮಂಜುಳಾ ಯೋಗೇಂದ್ರಪ್ಪ, ಕುಕ್ಕುವಾಡ ಗ್ರಾ.ಪಂ. ಪಿಡಿಓ ಶ್ರೀಮತಿ ಲಕ್ಷ್ಮಿ ದೇವಿ ಹೆಚ್.ವೈ. ಮುಖಂಡ ಡಿ.ಸಿ. ರುದ್ರಪ್ಪ, ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

ಉದ್ಘಾಟನೆಗೂ ಮುನ್ನ ಗ್ರಾಮದಲ್ಲಿ ಪಥ ಸಂಚಲನ ನಡೆಯಿತು.

error: Content is protected !!