ಎಸ್ಸೆಸ್ಸೆಂ ರಾಜ್ಯದ ಮುಖ್ಯಮಂತ್ರಿಯಾಗಲಿ ಅಕ್ಕಿ ವ್ಯಾಪಾರಿಗಳ ಆಶಯ

ದಾವಣಗೆರೆ, ಮೇ 15- ಉತ್ತರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರನ್ನು  ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ನಗರದ ಅಕ್ಕಿ ವರ್ತಕ ಎಸ್.ಜಿ.ಉಳುವಯ್ಯ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದ್ದಾರೆ. 

ಎಸ್ಸೆಸ್ಸೆಂ ಶ್ರಮಪಟ್ಟು ಕೆಲಸ ಮಾಡುವ ಉತ್ಸಾಹಿ ಯುವಕ,  ವೈಯಕ್ತಿಕ ನೆಲೆಯಲ್ಲಿ ಯಶಸ್ವೀ ಪುರುಷ ಎಂದಿರುವ ಅವರು, ಕೈಗಾರಿಕೆಗಳನ್ನು ಸ್ಥಾಪಿಸಿ ಸಾಕಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ. 

ಇಡೀ ದೇಶ ಕೊರೊನಾ ಭಯದಿಂದ ತತ್ತರಿಸಿದಾಗ ಎಸ್ಸೆಸ್ಸೆಂ ಸ್ವಂತ ಹಣ ಖರ್ಚು ಮಾಡಿ ಜನತೆಗೆ ಉಚಿತ ಲಸಿಕೆ ಕೊಟ್ಟರು. ಒಬ್ಬ ಯೋಗ್ಯರಿಗೆ ಅಧಿಕಾರ ಸಿಕ್ಕರೆ ಏನಾಗಬಹುದು ಎಂಬುದಕ್ಕೆ ಕೆಲ ನಿದರ್ಶನಗಳು ಎಂದು ಹೇಳಿದ್ದಾರೆ.

15000 ಆಶ್ರಯ ಮನೆಗಳ ನಿರ್ಮಾಣ, ಏಷ್ಯಾದಲ್ಲೇ 2ನೇ ದೊಡ್ಡ ಗಾಜಿನ ಮನೆ ನಿರ್ಮಾಣ. ವಿವಿಧೆಡೆ ಪಾರ್ಕುಗಳ ಅಭಿವೃದ್ಧಿ, ಸಿಸಿ ರಸ್ತೆಗಳ ನಿರ್ಮಾಣ, ಕುಂದುವಾಡ ಕೆರೆಯ ಅಭಿವೃದ್ಧಿ ಜೊತೆಗೆ ರಾಂಪುರ, ಮಾಳಗೊಂಡನಹಳ್ಳಿ, ಬೇತೂರು, ಟಿವಿ ಸ್ಟೇಷನ್ ಕೆರೆಗಳ ಅಭಿವೃದ್ಧಿ ಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.

ಇಂತಹ ಸಮರ್ಪಕರ ಕೈಯಲ್ಲಿ ಮುಖ್ಯಮಂತ್ರಿ ಹುದ್ದೆ ಬಂದರೆ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂದು ಉಳುವಯ್ಯ ತಿಳಿಸಿದ್ದಾರೆ.

error: Content is protected !!