ಹರಪನಹಳ್ಳಿ.ಏ.22- ಶ್ರದ್ಧಾ – ಭಕ್ತಿಯ ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿ ಇಂದು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಮುಸ್ಲಿಂ ಬಾಂಧವರು ಪಟ್ಟಣದ ಮೂರೂ ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ರಂಜಾನ್ ಹಬ್ಬದ ಮೆರಗು ಹೆಚ್ಚಿಸಿದರು.
ಹೊಸಪೇಟೆ ರಸ್ತೆಯ ತರಳಬಾಳು ಕಲ್ಯಾಣ ಮಂಟಪ ಹಿಂಭಾಗದ ದರ್ಗಾದಲ್ಲಿ ಆಲಿ ಅದೀಸ್ ಪಂಗಡದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಡಗಲಿ ರಸ್ತೆಯ ದರ್ಗಾದಲ್ಲಿ ಅಲಿ ಸುನ್ನಿ ಪಂಗಡದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಎಚ್.ಪಿ.ಎಸ್ ಕಾಲೇಜು ಹಿಂಭಾಗ ಹಕ್ ಸಮಿತಿಯವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಾವಿರಾರು ಮಂದಿ ಮುಸ್ಲಿಂ ಮಹಿಳೆಯರೂ ಸಹ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಇದಕ್ಕಾಗಿ ಹೊಸಪೇಟೆ ರಸ್ತೆಯ ಈದ್ಗಾ ಮೈದಾನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಒಂದೆಡೆ ಸೇರಿದ್ದ ಮುಸ್ಲಿಂ ಮಹಿಳೆಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸ್ಥಳಕ್ಕೆ ಪಕ್ಷೇತರ ಅಭ್ಯರ್ಥಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಭೇಟಿ ನೀಡಿ ಹಬ್ಬದ ಶುಭ ಕೋರಿದರು.
ತರಳಬಾಳು ಕಲ್ಯಾಣ ಮಂಟಪ ಹಿಂಭಾಗದ ದರ್ಗಾದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅರಸಿಕೇರಿ ಎನ್. ಕೋಟ್ರೇಶ್. ಜೆ.ಡಿ.ಎಸ್ ಅಭ್ಯರ್ಥಿ ನೂರ್ಅಹಮದ್ ಹಾಗೂ ಮುಖಂಡರಾದ ಹೆಚ್.ಎಂ. ಮಲ್ಲಿಕಾರ್ಜುನ ಭಾಗವಹಿಸಿ ಹಬ್ಬದ ಶುಭ ಕೋರಿದರು.
ಈ ವೇಳೆ ಅಂಜುಮನ್ ಅಧ್ಯಕ್ಷ ಮುಜುಬರ್ ರೆಹಮಾನ್ ಸಾಬ್, ಕೆ.ಪಿ.ಸಿ.ಸಿ ಸಂಯೋಜಕ ಬಿ.ನಜೀರ್, ಪುರಸಭೆ ಸದಸ್ಯರುಗಳಾದ ಡಿ.ಅಬ್ದುಲ್ ರೆಹಮಾನ್, ಎಂ.ವಿ. ಅಂಜಿನಪ್ಪ, ಜಾಕೀರ್ ಹುಸೇನ್, ಲಾಟಿ ದಾದಾ ಪೀರ್, ಟಿ.ವೆಂಕಟೇಶ್, ಎಂ.ಕೆ.ಜಾವೇದ್, ಮುಖಂಡ ರಾದ ಸಿ.ಜಾವೇದ್, ಬೆಲ್ದಾರ್ಭಾ ಷಾಸಾಬ್, ಎ.ಮೂಸಾ ಸಾಬ್, ಇರ್ಷಾದ್ ಬಾಷಾ, ಮಾಬೂಷಾ, ಬಿ.ಶೇಕ್ಷಾ ವಲಿ, ರಾಜಾಸಾಬ್, ಎಂ.ಜಾಫರ್, ಉಮರ್ಸಾಬ್, ಸೋಗಿ ಇಬ್ರಾಹಿಂ, ಗುಂಡಿನಕೇರಿ ಸತ್ತಾರಸಾಬ್ ಸೇರಿದಂತೆ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.