ಪ್ರಕಾಶ ಕೋಳಿವಾಡ ನಾಮಪತ್ರ ಸಲ್ಲಿಕೆ

ಪ್ರಕಾಶ ಕೋಳಿವಾಡ ನಾಮಪತ್ರ ಸಲ್ಲಿಕೆ

ರಾಣೇಬೆನ್ನೂರು, ಏ. 18- ರಾಣೇಬೆನ್ನೂರು ವಿಧಾನಸಭೆ   ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಪ್ರಕಾಶ ಕೋಳಿವಾಡ  ಅವರಿಂದು ಬೃಹತ್ ಮೆರವಣಿಗೆ ಮೂಲಕ ತಹಶೀಲ್ದಾರ್ ಕಛೇರಿಗೆ ತೆರಳಿ ಚುನಾವಣಾಧಿಕಾರಿಗೆ ತಮ್ಮ  ನಾಮಪತ್ರ ಸಲ್ಲಿಸಿದರು.

ಅಪಾರ ಸಂಖ್ಯೆಯ ಜನರ ಮೈಲುದ್ದದ ಮೆರವಣಿಗೆ ಎಪಿಎಂಸಿ ಗಣೇಶ ಗುಡಿಯಿಂದ ಹೊರಟು, ಪೋಸ್ಟ್‌ ಸರ್ಕಲ್ ಹಾಯ್ದು ಎಂಜಿ ರಸ್ತೆ ಮೂಲಕ ತಹಶೀಲ್ದಾರ್‌ ಕಛೇರಿ ತಲುಪಿತು.

ಪ್ರಕಾಶ ಕೋಳಿವಾಡ ಜೊತೆಗೆ ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ಜಟ್ಟೆಪ್ಪ ಕರೇಗೌಡ, ಕೃಷ್ಣಪ್ಪ ಕಂಬಳಿ, ಪಕ್ಷದ ಅಧ್ಯಕ್ಷ ಮಂಜನಗೌಡ ಪಾಟೀಲ, ಶೇರು ಕಾಬೂಲಿ, ಮಾಜಿ ಸಚಿವ ರುದ್ರಪ್ಪ ಲಮಾಣಿ ಮುಖಂಡರಾದ ಬಸನಗೌಡ ಮರದ, ಪುಟ್ಟಪ್ಪ ಮರಿಯಮ್ಮನವರ, ಮಧು ಕೋಳಿವಾಡ ಮತ್ತಿತರರಿದ್ದರು.

error: Content is protected !!