ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಆಟೋ ಹಾವಳಿ: ಪ್ರಯಾಣಿಕರಿಗೆ ಸಮಸ್ಯೆ

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಆಟೋ ಹಾವಳಿ: ಪ್ರಯಾಣಿಕರಿಗೆ ಸಮಸ್ಯೆ

ಮಾನ್ಯರೇ, 

ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸ್ಮಾರ್ಟ್ ಆಗಿ ನವೀಕರಣ ಗೊಂಡು ಗಮನ ಸೆಳೆಯುತ್ತಿದೆ. ಈ ನಿಲ್ದಾಣದಲ್ಲಿ  ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.

ಬಸ್ ನಿಲ್ದಾಣ ಎಂದ ಮೇಲೆ ಜನಜಂಗುಳಿ ಸಹಜ. ಇದರ ಜೊತೆಗೆ, ನಿಲ್ದಾಣದ ಎದುರು ಮಾರುಕಟ್ಟೆ ಹಾಗೂ ತಹಶೀಲ್ದಾರ್ ಕಚೇರಿ ಇದೆ. ಇದೆಲ್ಲದರಿಂದ ಜನಸಂದಣಿ ಇನ್ನೂ ಹೆಚ್ಚಾಗಿದೆ.

ಇಷ್ಟು ಸಾಲದು ಎಂಬಂತೆ ಆಟೋಗಳು ಬಸ್ ನಿಲ್ದಾಣದ ಎದುರೇ ನಿಲ್ಲುತ್ತವೆ. ಸನಿಹದಲ್ಲೇ ರಸ್ತೆ ಪಕ್ಕದಲ್ಲಿ ಲಾರಿ ಇತ್ಯಾದಿ ವಾಹನಗಳೂ ನಿಂತಿರುತ್ತವೆ. ಇದೆಲ್ಲದರಿಂದ ಬಸ್‌ ನಿಲ್ದಾಣಕ್ಕೆ ಬರುವ ಹಾಗೂ ಹೋಗುವ ಪ್ರಯಾಣಿಕರು ತೊಂದರೆ ಎದುರಿಸುವಂತಾಗಿದೆ.

ಪಾದಚಾರಿಗಳು ಹಾಗೂ ಪ್ರಯಾಣಿಕರು ಅನುಕೂಲಕ್ಕಾಗಿ ಈ ಸಮಸ್ಯೆಗಳನ್ನು ಬಗೆಹರಿಸಲು ಸಂಚಾರಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಿದೆ.

– ವೀರಭದ್ರಪ್ಪ, ದಾವಣಗೆರೆ.

error: Content is protected !!