ಮತ್ತೆ ಹಂದಿಗಳ ಸಂಖ್ಯೆ ಹೆಚ್ಚುತ್ತಿದೆ

ಮತ್ತೆ ಹಂದಿಗಳ ಸಂಖ್ಯೆ ಹೆಚ್ಚುತ್ತಿದೆ

ಮಾನ್ಯರೇ, 

ದಾವಣಗೆರೆ ಸ್ಮಾರ್ಟ್ ಸಿಟಿಯಲ್ಲಿ ಹಂದಿಗಳ ಹಾವಳಿ ಮತ್ತೆ ಆರಂಭವಾಯಿತೇ? ನಗರದಲ್ಲಿ ಸಂಪೂರ್ಣವಾಗಿ ಹಂದಿಗಳು ಕಣ್ಮರೆಯಾಗಿದ್ದವು. ಆದರೆ ಇತ್ತೀಚಿನ ಕೆಲ ದಿನಗಳಿಂದ ಹಿಂದಿನಂತೆಯೇ ಹಂದಿಗಳು ಕಾಣಸಿಗುತ್ತಿವೆ. 

ಸ್ವಚ್ಛತೆಗೆ ಮಾದರಿ ಆಗಲು ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಈ ಹಂದಿಗಳಿಂದ ಹೊರೆಯು ಹೆಚ್ಚಾಗದಿರಲಿ. ಹಂದಿಗಳ ಸಂಖ್ಯೆಯು ಪೂರ್ಣ ಪ್ರಮಾಣದಲ್ಲಿ ಕಡಿತಗೊಳ್ಳಲಿ. ಇಲ್ಲವಾದಲ್ಲಿ ಈಗಾಗಲೇ ಖಾಲಿ ನಿವೇಶನಗಳಲ್ಲಿ ಮತ್ತು ಕೆಲ ಜಾಗ ಸಿಕ್ಕರೆ ಕಸಗಳನ್ನು ಚೆಲ್ಲುವ ಜನಗಳ ನಡುವೆ ಈ ಹಂದಿಗಳಿಂದ ಆಗುವ ನಗರದ ಮಾಲಿನ್ಯಕ್ಕೆ ಹೊಣೆ ಹೊರುವವರು ಯಾರು ಆಗುತ್ತಾರೆ? ನಗರದ ಸ್ವಚ್ಛತೆಗೆ ಪ್ರತಿಯೊಬ್ಬ ನಾಗರಿಕರು ಕಾರಣೀಭೂತರಾಗಬೇಕಾಗಿದೆ. ಇದರ ಜೊತೆ ಹಂದಿಗಳನ್ನು ನಿರ್ಮೂಲನೆಗೊಳಿಸಬೇಕಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಬೇಕಾಗಿದೆ.

– ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ

error: Content is protected !!