ರಾಣೇಬೆನ್ನೂರು : ಪರಮೇಶ್‌ ಗೂಳಣ್ಣನವರ ಹುಟ್ಟು ಹಬ್ಬದಲ್ಲಿ ಪ್ರತಿಭಾ ಪುರಸ್ಕಾರ

ರಾಣೇಬೆನ್ನೂರು : ಪರಮೇಶ್‌ ಗೂಳಣ್ಣನವರ ಹುಟ್ಟು ಹಬ್ಬದಲ್ಲಿ ಪ್ರತಿಭಾ ಪುರಸ್ಕಾರ

ರಾಣೇಬೆನ್ನೂರು, ಜು. 23- ಶ್ರಮ ವಹಿಸಿ ದುಡಿದ ಹಣದಲ್ಲಿ ಪ್ರತಿಭಾವಂತರನ್ನು, ನಿಸ್ವಾರ್ಥ ಶ್ರಮಿಕರನ್ನು, ಸಮಾಜ ಸೇವಕರನ್ನು ಗೌರವಿಸುವ ಈ ಕಾರ್ಯ ಶಿವ ಮೆಚ್ಚುವಂತಹದ್ದು ಎಂದು ಲಿಂಗನಾಯ್ಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಶಿವಯೋಗಿಗಳು ನುಡಿದರು.

ಶ್ರೀಗಳು ಇಲ್ಲಿನ ಸಿದ್ದೇಶ್ವರ ಸಮುದಾಯ ಭವನದಲ್ಲಿ ನಡೆದ ಪರಮೇಶ ಗೂಳಣ್ಣನವರ ಹುಟ್ಟುಹಬ್ಬದಂದು ಪ್ರತಿಭಾ ಪುರಸ್ಕಾರ, ನಿಸ್ವಾರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಉಪದೇಶಿಸುತ್ತಿದ್ದರು. ಜೊತೆಗೆ ಮೌನಾಚರಣೆಯಲ್ಲಿರುವ ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಸಮಾಜಕ್ಕೆ, ದೇಶಕ್ಕೆ ಭಾರವಾಗಿ ಬದುಕು ನಡೆಸುವುದಕ್ಕಿಂತ ಸಮಾಜ ಪರ ಚಿಂತನೆಯ ಇಂತಹ ಬದುಕು ನಡೆಸುವ ಮಕ್ಕಳನ್ನು ಪಡೆದವರು ಪುಣ್ಯವಂತರು ಎಂದ ಶ್ರೀಗಳು, ಪರಮೇಶಪ್ಪನಿಂದ ಇನ್ನು ಹೆಚ್ಚು ಕಾರ್ಯಗಳು ನಡೆಯಲಿವೆ. ಸಾಮಾಜಿಕ, ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಅವಕಾಶಗಳು ದೊರಕಲಿ ಎಂದು ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರಮ್ಮ ಗೂಳಣ್ಣನವರ ವಹಿಸಿದ್ದು, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಆರ್. ಶಂಕರ್, ಜಿ.ಪಂ. ಮಾಜಿ ಸದಸ್ಯ ಕಾಂತೇಶ, ಬಿಜೆಪಿ ಮುಖಂಡರಾದ ಸೋಮಶೇಖರ ಗೌಡಶಿವಣ್ಣನವರ,  ಕೆ. ಶಿವಲಿಂಗಪ್ಪ, ಡಿವೈಎಸ್ಪಿ ಶ್ರೀಧರ,  ಪಾಲಾಕ್ಷಗೌಡ, ಕರಬಸಪ್ಪ ಮಾಕನೂರ,  ರೂಪಾ ಬಾಕಳೆ, ಹೊನ್ನವ್ವ ಕಾಟಿ ಮತ್ತಿತರರಿದ್ದರು.

ಗಜೇಂದ್ರ ಬಸೇನಾಯ್ಕರ ಸ್ವಾಗತಿಸಿದರು. ಪ್ರಕಾಶ ಹನಗೋಡಿಮಠ ಪ್ರಾರ್ಥಿಸಿದರು. ಸೋಮಶೇಖರ ಗೌಡ ಶಿವಣ್ಣನವರ ವಂದಿಸಿದರು.

error: Content is protected !!