ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ

ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ

ರಾಣೇಬೆನ್ನೂರು, ಏ.16- ಸ್ಥಳೀಯ ಶ್ರೀ ಹಿರೇಮಠ ಸಂಸ್ಕೃತಿ ಸಂರಕ್ಷಣಾ ಸಮಿತಿ ವತಿಯಿಂದ ನಗರದ ಹೊರವಲಯದ ಶ್ರೀ ಶನೇಶ್ಚರ ಸ್ವಾಮಿಯ ಬಯಲು ಆಲಯ ದ್ವಾದಶ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ಲೋಕ ಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ನಿರಂತರ 593 ದಿನಗಳ ಕಾಲ ಜರುಗುವ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ, ಮಹಾತಪಸ್ವಿ ಶ್ರೀ ಸಿದ್ದಲಿಂಗ ಜಗದ್ಗುರುಗಳವರ ಪುಣ್ಯ ಸ್ಮರಣೋತ್ಸವ ಕಾರ್ಯ ಕ್ರಮದ ಅಂಗವಾಗಿ ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾ ಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋ ತ್ಸವವು ಭಕ್ತರ ಮಧ್ಯ ಬಹು ಭಕ್ತಿಪೂರ್ವಕವಾಗಿ ಇಂದು ನೆರವೇರಿತು.  

ಸ್ಥಳೀಯ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದಿಂದ ಮಹಿಳೆಯರ ಕುಂಭ ಮೇಳ, ಸಮಾಳ ಸೇರಿದಂತೆ ವೈವಿಧ್ಯಮಯ ವಾದ್ಯ ಮೇಳ ಗಳೊಂದಿಗೆ ಆರಂಭವಾದ ಮಹೋತ್ಸವವು ಹರ-ಗುರು-ಚರ ಮೂರ್ತಿಗಳೊಂದಿಗೆ ಅದ್ಧೂರಿ ಯಾಗಿ ಜರುಗಿತು. ಶ್ರೀಮಠದ ಶಿವಯೋಗಿ ಶಿವಾ ಚಾರ್ಯ ಮಹಾಸ್ವಾಮಿಗಳು, ನಿಚ್ಚವ್ವನಹಳ್ಳಿಯ ಶಿವಯೋಗಿ ಶ್ರೀಗಳು, ನಾಗವಂದದ ಶ್ರೀ ಶಿವಾ ನಂದ ಸ್ವಾಮೀಜಿ, ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮೀಜಿ, ಮಂಜುನಾಥ ಮಠಪತಿ, ಬಸವರಾಜ ಸವಣೂರ, ರವಿಂದ್ರಗೌಡ ಪಾಟೀಲ, ಹಾಲೇಶಪ್ಪ ಗೌಳಿ ಸೇರಿದಂತೆ ಮತ್ತಿತರರು ಇದ್ದರು.

error: Content is protected !!