ಜಗಳೂರಿನಲ್ಲಿ ಮೋದೀಜಿ ಹುಟ್ಟುಹಬ್ಬ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಜಗಳೂರಿನಲ್ಲಿ ಮೋದೀಜಿ ಹುಟ್ಟುಹಬ್ಬ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಜಗಳೂರು, ಸೆ.23- ಪ್ರಧಾನಿ ಮೋದೀಜಿ ಅವರ ಆಡಳಿತ ಪ್ರಪಂಚಕ್ಕೇ ಮಾದರಿ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಬಣ್ಣಿಸಿದರು‌.

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಪ್ರಧಾನಿ ಮೋದೀಜಿ ಅವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಪಕ್ಷದಿಂದ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು.

ವಿಶ್ವಕ್ಕೆ ಭಾರತ ದೇಶವನ್ನು ಪರಿಚಯಿಸಿದ ಪ್ರಧಾನಿ ಮೋದೀಜಿ ಅವರು ಮೊದಲಿಗರು. ಅಲ್ಲದೆ ತಂತ್ರಜ್ಞಾನ, ಶಿಕ್ಷಣ, ಸೇರಿದಂತೆ ವಿವಿಧ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದರು.

ಸಂಪೂರ್ಣ ಬರ ಪೀಡಿತ ಪಟ್ಟಿಗೆ ಜಗಳೂರು ಸೇರ್ಪಡೆಗೊಂಡಿದ್ದು ಸ್ವಾಗತಾರ್ಹ. ಆದರೆ ರಾಜ್ಯ ಸರ್ಕಾರ ಇಲಾಖೆಯ  ನೈಜ ವರದಿ ಅನ್ವಯ ರೈತರಿಗೆ ಬರ ಪರಿಹಾರ ಒದಗಿಸಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ. ಮಹೇಶ್, ಪ.ಪಂ ಸದಸ್ಯರಾದ ಪಾಪಲಿಂಗಪ್ಪ, ನವೀನ್ ಕುಮಾರ್, ದೇವರಾಜ್, ಮುಖಂಡರಾದ ಹನುಮಂತಪ್ಪ, ಬಿದರಕೆರೆ ರವಿಕುಮಾರ್, ಪೂಜಾರ್ ಸಿದ್ದಪ್ಪ, ಓಬಳೇಶ್, ವಕೀಲ ಹನುಮಂತಪ್ಪ ಮತ್ತಿತರರು ಇದ್ದರು.

error: Content is protected !!