ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಮಹೇಶ್

ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಮಹೇಶ್

ಹರಿಹರ, ಮಾ. 3- ಹರಿಹರ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ  ನೂತನ ಅಧ್ಯಕ್ಷರಾಗಿ ಕೆಂಚನಹಳ್ಳಿ ಗ್ರಾಮದ ಕೆ.ಹೆಚ್. ಮಹೇಶ್ ಅವರು ಶುಕ್ರವಾರ ನಡೆದ ಚುನಾವಣಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಲೇಬೆನ್ನೂರಿನ ಸಿ. ಅಬ್ದುಲ್ ಹಾದಿ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ತಾ. ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಸಂಘದ ಉಪಾಧ್ಯಕ್ಷ ರುದ್ರಪ್ಪ, ನಿರ್ದೇಶಕರಾದ ಸಿ. ಅಬ್ದುಲ್ ಹಾದಿ, ಜಿ.ಹೆಚ್. ರಾಮನಗೌಡ, ಟಿ. ಬಸವರಾಜ್, ಎ. ಗಂಗಾಧರಪ್ಪ, ಸಣ್ಣ ಚಂದ್ರಾನಾಯ್ಕ, ಎಂ. ನಿಂಗನಗೌಡ, ಎನ್.ಜಿ. ಜಯಣ್ಣ, ಹೆಚ್. ಆಂಜನೇಯ, ಕೆ. ಅಬುಜಾರ್, ಬನ್ನಿಕೋಡು ಕಾಂತರಾಜ್, ಶ್ರೀಮತಿ ವನಜಾಕ್ಷಮ್ಮ, ಶ್ರೀಮತಿ ಅನುಪಮ, ಕೆಂಚವೀರಯ್ಯ ಹಾಜರಿದ್ದು, ಅವಿರೋಧ ಆಯ್ಕೆಗೆ ಸಹಕರಿಸಿದರು.

ಹಿರಿಯರಾದ ಸಿರಿಗೆರೆ ನಾಗನಗೌಡ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಸಿರಿಗೆರೆ ಪರಮೇಶ್ವರಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ. ಹಾಲೇಶಪ್ಪ, ಭಾನುವಳ್ಳಿ ಕೊಟ್ರಪ್ಪ, ಆರ್.ಸಿ. ಪಾಟೀಲ್ ಮತ್ತಿತರರು ಈ ವೇಳೆ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಸಂಘದ ಕಾರ್ಯದರ್ಶಿ ಗಣೇಶ್ ಸ್ವಾಗತಿಸಿದರು.

error: Content is protected !!