ಬಿರುಕುಗೊಂಡಿದ್ದ ದಾಂಪತ್ಯ ಜೀವನದ ಜೋಡಿಗಳನ್ನು ಪರಸ್ಪರ ಹೊಂದಾಣಿಕೆ ಮಾಡಿಸಿದ ನ್ಯಾಯಾಧೀಶರು

ಬಿರುಕುಗೊಂಡಿದ್ದ ದಾಂಪತ್ಯ ಜೀವನದ ಜೋಡಿಗಳನ್ನು  ಪರಸ್ಪರ ಹೊಂದಾಣಿಕೆ ಮಾಡಿಸಿದ ನ್ಯಾಯಾಧೀಶರು

ಹರಪನಹಳ್ಳಿ, ಸೆ.9- ಸುಮಾರು ವರ್ಷಗಳಿಂದ ಬಿರುಕುಗೊಂಡಿದ್ದ ದಾಂಪತ್ಯ ಜೀವನದ ಎರಡು ಜೋಡಿಗಳನ್ನು ಪರಸ್ಪರ ಹೊಂದಾಣಿಕೆ ಮಾಡಿಸಿದ ಹಿರಿಯ ಮತ್ತು ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಹಿರಿಯ ಮತ್ತು ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ಬಿರುಕು ಗೊಂಡಿದ್ದ ದಾಂಪತ್ಯ ಜೀವನದ ಎರಡು ಜೋಡಿಗಳನ್ನು ಪರಸ್ಪರ ಹೊಂದಾಣಿಕೆ ಮಾಡಿಸಿ, ಇಬ್ಬರ ಮನಸ್ಸನ್ನು ಬದಲಾಯಿಸಿ, ನೂತನ ಜೀವನಕ್ಕೆ ನ್ಯಾಯಾಧೀಶರುಗಳು ಮನವೊಲಿಸಿ ಸತಿ – ಪತಿಗಳಾದ ಯಲ್ಲಪ್ಪ ಮತ್ತು ಧನುಶ್ರೀ ಮತ್ತು ಗುರುಲಿಂಗನಗೌಡ ಮತ್ತು ಸುಭದ್ರ ದಂಪತಿಗಳಿಗೆ ಎರಡು ಜೋಡಿಗಳ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ವಕೀಲರುಗಳು ಸಂತೋಷ ವ್ಯಕ್ತಪಡಿಸಿ, ಸಿಹಿ ಹಂಚಿ ಸಂಭ್ರಮಿಸಿ ಒಗ್ಗೂಡಿಸಿ ಯಶಸ್ವಿಗೊಳಿಸಿದರು. 

ನಂತರ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳು ಬಿರುಕು ಗೊಂಡಿದ್ದ ದಾಂಪತ್ಯ ಜೀವನವನ್ನು ಮತ್ತೆ ಜೊತೆಗೂಡಿಸು ವಲ್ಲಿ ನ್ಯಾಯಾಧೀಶರುಗಳು ಯಶಸ್ವಿಯಾದರು.

ತಾಲ್ಲೂಕು ಸೇವೆಗಳ ಪ್ರಾಧಿಕಾರದ ವತಿ ಯಿಂದ ಹರಪನಹಳ್ಳಿ ಉಭಯ ನ್ಯಾಯಾಲಯ ದಲ್ಲಿ ಆಯೋಜಿಸಿದ್ದಲಾಗಿದ್ದ ರಾಷ್ಟ್ರೀಯ ಲೋಕ ಆದಾಲತ್‍ನಲ್ಲಿ ನಡೆದ ಒಟ್ಟು 1246 ಪ್ರಕರಣ ಗಳನ್ನು ಕೈಗೆತ್ತಿಕೊಂಡು, 1078 ಪ್ರಕರಣಗಳನ್ನು ಉಭಯ ನ್ಯಾಯಾಲಯದ ನ್ಯಾಯಾ ಧೀಶರುಗಳಾದ ಎಂ. ಭಾರತಿ ಮತ್ತು ಫಕ್ಕೀರವ್ವ ಕೆಳಗೇರಿ ಅವರುಗಳ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಪಟ್ಟಣದ ಉಭಯ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ರಸ್ತೆ ಅಪಘಾತ, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಿ, ಜಮೀನು ವಿವಾದ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ಲಿ ಪ್ರಕರಣ, ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು, ನಿವೇಶನ ಮಾರಾಟ ಒಳಗೊಂಡಂತೆ ಹಿರಿಯ  ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಭಾರತಿ ಅವರ ನ್ಯಾಯಾಲಯದಲ್ಲಿ ಒಟ್ಟು 613 ಪ್ರಕರಣಗಳ ಪೈಕಿ 523 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಒಟ್ಟು 56,49,197 ಲಕ್ಷ ರೂ.ಗಳು ಮತ್ತು ಬ್ಯಾಂಕ್ ದಾವಾ ಪೂರ್ವ ಪ್ರಕರಣಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು. 

ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಾದ ಫಕ್ಕೀರವ್ವ ಕೆಳಗೇರಿ ಅವರು ನ್ಯಾಯಾಲಯ ದಲ್ಲಿ ಒಟ್ಟು 633 ಪ್ರಕರಣಗಳ ಪೈಕಿ 555 ಪ್ರಕರಣಗಳನ್ನು  ಇತ್ಯರ್ಥಪಡಿಸಿ, ಒಟ್ಟು 83,58,589 ಲಕ್ಷ ರೂ.ಗಳನ್ನು ಹಣದ ರೂಪ ದಲ್ಲಿ ಇತ್ಯರ್ಥ ಪಡೆಸಿದರು. ಉಭಯ ನ್ಯಾಯಾ ಲದಲ್ಲಿ  ಒಟ್ಟು 1078  ಪ್ರಕರಣಗನ್ನು    ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೆ.ವಿರೂಪಾಕ್ಷಪ್ಪ,  ಕಾರ್ಯದರ್ಶಿ ಕೆ.ಆನಂದ, ಖಜಾಂಚಿ ರೇಣುಕಾ ಮೇಟಿ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ,  ಹಿರಿಯ ವಕೀಲರಾದ ಪಿ.ಜಗದೀಶ್ ಗೌಡ್ರು, ಬಿ.ರೇವಣಗೌಡ್ರು, ಟಿ.ವೆಂಕಟೇಶ್, ಕೋಡಿಹಳ್ಳಿ ಪ್ರಕಾಶ್ ಬಿ.ಹಾಲೇಶ್, ಬಿ.ಗೋಣಿಬಸಪ್ಪ, ಕೆ.ಎಸ್.ಮಂಜ್ಯಾನಾಯ್ಕ, ಮುತ್ತಿಗಿ ರೇವಣಸಿದ್ದಪ್ಪ,  ಎಂ.ಮೃತ್ಯುಂಜಯ, ಇದ್ಲಿ ರಾಮಪ್ಪ, ದೇವರಾಜ್, ಎಸ್.ತಿಪ್ಪೇಸ್ವಾಮಿ, ಎಸ್. ಜಾಕೀರ್, ಬಿ.ಬಸವರಾಜ್, ಜಿ.ಹಾಲೇಶ್, ಕೆ.ಕೊಟ್ರೇಶ್, ಎ.ಕೆ.ಎನ್.ಮಲ್ಲಪ್ಪ, ಡಿ.ಹನುಮಂತಪ್ಪ, ರಾಜಪ್ಪ, ಸಿ.ರಾಜಪ್ಪ, ಸಿ.ಜಾತಪ್ಪ, ಜೆ.ಸೀಮಾ, ದ್ರಾಕ್ಷಾಯಣಮ್ಮ, ಬಿ.ತಿಪ್ಪೇಶ್, ಸಿದ್ದೇಶ್, ಹನುಮಂತಪ್ಪ , ಕಂಡ್ಯಪ್ಪ, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಕೊಟ್ರೇಶ್, ಬಸವ ರಾಜ್ ಹಾಗೂ  ಸೇರಿದಂತೆ ಮತ್ತಿತರರಿದ್ದರು.

error: Content is protected !!