ಎಂಎಲ್‌ಸಿ ನಾಮಿನಿ ನೇಮಕಕ್ಕೆ ಕೊರಚ ಸಮಾಜದ ಆಗ್ರಹ

ದಾವಣಗೆರೆ, ಜು. 11- ಕೊರಚ ಸಮಾಜದ ಮುಖಂಡರೊಬ್ಬರನ್ನು ವಿಧಾನಪರಿಷತ್ ಸದಸ್ಯತ್ವಕ್ಕೆ ನಾಮಿನಿಯನ್ನಾಗಿ ಅಥವಾ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡುವಂತೆ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ರಾಜ್ಯಾಧ್ಯಕ್ಷ ಹೆಚ್.ಎನ್. ರಾಮಚಂದ್ರಪ್ಪ ಅವರು, ಸಮಾಜ ಮುಖಂ ಡರಾದ ಹೆಚ್.ಎನ್. ರಾಮಚಂದ್ರಪ್ಪ, ರಾಜೇಶ್ ಮುಟಗಾರ್, ಎಸ್.ಎಲ್. ಹನುಮಂತಪ್ಪ, ಸುರೇಶ್ ಶಿವಪುರ ಹಾಗೂ ಯಲ್ಲಪ್ಪ ಪೂಜಾರ್ ಈ ಐವರ ಪೈಕಿ ಯಾರಾದರೊಬ್ಬರನ್ನು ನಾಮಿನಿಯಾಗಿ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.

ಕೊರಚ-ಕೊರಮ ಅಭಿವೃದ್ಧಿ ನಿಗಮಕ್ಕೆ ಬಜೆಟ್‌ನಲ್ಲಿ ಮಂಜೂರಾತಿ ನೀಡಲಾಗಿದೆ. ಆದರೆ, ಕಾರ್ಯೋನ್ಮುಖರಾಗಿಲ್ಲ. 5 ಕೋಟಿ ರೂ. ಹಣ ಮೀಸಲಿಟ್ಟಿರುವುದಾಗಿ ಪ್ರಕಟಣೆಯಾಗಿದ್ದು, ಇದುವರೆಗೂ ಬಿಡಗಡೆಯಾಗಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕೊರಚ ಸಮಾಜದ ಪ್ರಧಾನ ಕಾರ್ಯದರ್ಶಿ ಭೋಜರಾಜ್ ಮುಟಗಾರ್, ರಾಜೇಶ್, ಬಾಲಪ್ಪ ಗಂಗಾವತಿ, ಕುಮಾರ್, ಧನಂಜಯ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!