ಜಲಸಿರಿ ಯೋಜನೆ ಕಾಮಗಾರಿ ಪರಿಶೀಲಿಸಿದ ಶಾಸಕರು, ಮೇಯರ್‌

ದಾವಣಗೆರೆ, ಜು.10- ನಗರದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಲಸಿರಿ ಯೋಜನೆ ಯಡಿ ಕುಂದುವಾಡ ಕೆರೆಯನ್ನು 13 ಕೋಟಿ ರೂ. ಮೊತ್ತದಲ್ಲಿ ಕೆರೆಯ ಸ್ವಚ್ಛತೆ, ಏರಿ ದುರಸ್ತಿ, ಲೈಟಿಂಗ್ ವ್ಯವಸ್ಥೆ, ಸಸಿಗಳನ್ನು ನೆಡಲಾಗುತ್ತದೆ.  ಕುಂದುವಾಡ ಕೆರೆಯ ಬಳಿ 1.42 ಕೋಟಿ ರೂ. ಮೊತ್ತದಲ್ಲಿ ರಾಜನಹಳ್ಳಿಯಿಂದ 20 ಎಂ.ಎಲ್‌.ಡಿ ಸಬ್‌ಲೈನ್ ಮೂಲಕ ನಗರಕ್ಕೆ ಕುಡಿಯುವ ನೀರನ್ನು ತರುವ ಕಾಮಗಾರಿಯನ್ನು ಶಾಸಕ ಎಸ್.ಎ.ರವೀಂದ್ರನಾಥ್, ಮಹಾಪೌರ ಬಿ.ಜಿ.ಅಜಯ್‌ಕುಮಾರ್ ಅವರುಗಳು ಇಂದು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಯಪ್ರಕಾಶ್, ಸ್ಮಾರ್ಟ್‌ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!