ಸಾರ್ವಜನಿಕ ಸ್ಥಳದಲ್ಲಿ ಓಡಾಡದಂತೆ ಕಿರುಕುಳ

ದಾವಣಗೆರೆ, ಫೆ.5- ಸಾರ್ವಜನಿಕವಾಗಿ ಓಡಾಡಲು ಇರುವ 10 ಅಡಿ ಜಾಗದಲ್ಲಿ ನಮ್ಮ ಮನೆಗೆ ನಾವು ಓಡಾಡಿದರೆ, ಮನೆಯ ಪಕ್ಕದಲ್ಲಿರುವ ವ್ಯಕ್ತಿಯೋರ್ವರು ಓಡಾಡದಂತೆ ತಡೆಯೊಡ್ಡುತ್ತಿದ್ದು, ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ವಿನೋಬನಗರದ ಬಿ.ಕೆ. ರಂಗನಾಥ್ ಆರೋಪಿಸಿದ್ದಾರೆ.

ವಿನೋಬನಗರದ 4ನೇ ಮುಖ್ಯ ರಸ್ತೆಯಲ್ಲಿ ವಾಸ ವಿದ್ದು, ಮನೆಯ ಪಕ್ಕದಲ್ಲಿರುವ ಸಾರ್ವಜನಿಕ ಜಾಗದಲ್ಲೇ  ನಾವು ಓಡಾಡಬೇಕಾಗಿದ್ದು, ಹಾಗೇನಾದರೂ ಓಡಾಡಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೇ ವಿನಾಕಾರಣ ಗಲಾಟೆ ಮಾಡುತ್ತಿದ್ದಾರೆ. ಅವರ ಮನೆಯ ಪಕ್ಕದಲ್ಲಿರುವ ನಮ್ಮ ಜಾಗವನ್ನು ಪಡೆಯಲು ಹೀಗೆ ನಮಗೆ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು  ಅವರು ಪತ್ರಿಕಾಗೋಷ್ಠಿ ಯಲ್ಲಿ ಅಳಲು ತೋಡಿಕೊಂಡರು. ನನಗಾಗಿರುವ ಸಮಸ್ಯೆ ಕುರಿತು ನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೂ ತಂದಿ ದ್ದೇನೆ. ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆದರೂ ಯಾವುದೇ ರೀತಿಯಲ್ಲಿ ಕ್ರಮ ತೆಗೆದುಕೊಂಡಿಲ್ಲ. ನನಗೆ ನ್ಯಾಯ ಸಿಗುತ್ತಿಲ್ಲ ಎಂದು ಅವರು ದೂರಿದರು.

error: Content is protected !!