ಆವಿಷ್ಕಾರ, ನಾವೀನ್ಯತೆ ಪುರಸ್ಕಾರಕ್ಕೆ ಅರ್ಜಿ

ದಾವಣಗೆರೆ, ಡಿ.25- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರೊ. ಯು.ಆರ್. ರಾವ್ ಪುರಸ್ಕಾರ, ಪದವಿ ವಿದ್ಯಾರ್ಥಿಗಳಿಗೆ ಪ್ರೊ. ಎಸ್.ಕೆ.ಶಿವಕುಮಾರ್ ಪುರಸ್ಕಾರ ಹಾಗೂ ಜನಸಾಮಾನ್ಯರು ಮತ್ತು ಬೋಧಕರಿಗೆ ಕೆ.ಎಸ್.ಟಿ.ಎ. ಪುರಸ್ಕಾರಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‍ಸೈಟ್ www.kstacademy.in ನಲ್ಲಿ ಪಡೆಯಬಹು ದಾಗಿದೆ. ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನವಾಗಿರುತ್ತದೆ.

error: Content is protected !!