ಭರಮಸಾಗರದಲ್ಲಿ ಇಂದು ದೇವಸ್ಥಾನದ ಅರ್ಚಕರುಗಳಿಗೆ ಸನ್ಮಾನ

ಪವಮಾನ ಪ್ರತಿಷ್ಠಾನದ ವತಿಯಿಂದ ಶ್ರೀ ಹಂಪೆ ವಿರೂಪಾಕ್ಷೇಶ್ವರ ಬ್ರಹ್ಮ ರಥೋತ್ಸವದ ಪ್ರಯುಕ್ತ ದೇವಸ್ಥಾನದ ಅರ್ಚಕರುಗಳಿಗೆ ವಾಣಿ ನಿವಾಸ ಅಂಗಳದಲ್ಲಿ ಇಂದು ಮಧ್ಯಾಹ್ನ 4ಕ್ಕೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ  ನಿರ್ದೇಶಕ ಪಿ.ಸಿ. ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಐಐಟಿ ಮದ್ರಾಸ್‌ನ ವಿಶ್ರಾಂತ ಪ್ರಾಧ್ಯಾಪಕ ಡಾ. ಮ.ನಾ.ಸುಧೀಂದ್ರರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಾಸ್ತು, ಜ್ಯೋತಿಷ್ಯ, ಚಿಂತನೆ ಸಲಹೆಗಾರರಾದ ಶ್ರೀಮತಿ ಮಾಲತಿ ವಿ. ವಿಠ್ಠಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. 

ಕಾರ್ಯಕ್ರಮದಲ್ಲಿ ಬಿ. ಮಲ್ಲಾರಿರಾವ್, ರಾಘವೇಂದ್ರ ಎಸ್., ಡಿ.ಎನ್. ಶಶಿಧರ ಶರ್ಮ, ಡಿ.ಆರ್. ಮುರುಳೀಧರ, ಜಿ.ಎಸ್. ಉಮೇಶ್, ಎಸ್.ಎ. ರಾಮಕೃಷ್ಣಚಾರಿ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಜಯರಾವ್, ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮಿ ಅನಂತ ಪದ್ಮನಾಭರಾವ್, ಸಂಸ್ಥಾಪಕ ಬಿ.ಜೆ. ಅನಂತಪದ್ಮನಾಭರಾವ್ ತಿಳಿಸಿದ್ದಾರೆ.

error: Content is protected !!