ಹಾಲೇಕಲ್ಲು: ಗೋಣಿ ಬಸವೇಶ್ವರ ಸ್ವಾಮಿಯ ವಿಜೃಂಭಣೆಯ ರಥೋತ್ಸವ

ಹಾಲೇಕಲ್ಲು: ಗೋಣಿ ಬಸವೇಶ್ವರ ಸ್ವಾಮಿಯ ವಿಜೃಂಭಣೆಯ ರಥೋತ್ಸವ - Janathavaniಜಗಳೂರು, ಏ. 3- ತಾಲ್ಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಶ್ರೀ ಗೋಣಿ ಬಸವೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ರಥದ ಬೀದಿಯ ಆವರಣದಲ್ಲಿ ರಥಕ್ಕೆ ಬಾವುಟ, ಹಸಿರು ತೋರಣ, ಬಗೆ ಬಗೆಯ ಹೂಗಳಿಂದ ಸಿಂಗಾರ ಮಾಡಲಾಗಿತ್ತು.

ಶ್ರೀ ಗೋಣಿ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತಗೊಳಿಸಿ, ಪಲ್ಲಕ್ಕಿಯಲ್ಲಿ ಜಯಘೋಷಗಳೊಂದಿಗೆ ಭಕ್ತರು ರಥದ ಸುತ್ತಲು ಪ್ರದಕ್ಷಿಣೆ ಮಾಡಿ ರಥಕ್ಕೆ ಸ್ವಾಮಿಯನ್ನು ಕರೆ ತರಲಾಯಿತು.

ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಎಳೆಯಲಾಯಿತು. ಭಕ್ತರು ರಥಕ್ಕೆ ಹೂವು-ಬಾಳೆಹಣ್ಣು ಸಮರ್ಪಿಸಿದರು.

error: Content is protected !!