ಬಸವಾಪಟ್ಟಣ ಶ್ರೀ ದುರುಗಮ್ಮ ದೇವಿ ಎಡೆಜಾತ್ರೆ ಮಹೋತ್ಸವ

ದಾವಣಗೆರೆಯ ಬೇತೂರು ರಸ್ತೆಯಲ್ಲಿರುವ ಶ್ರೀ ದುರುಗಮ್ಮ ದೇವಸ್ಥಾನ ಸಮಿತಿಯಿಂದ ಇಂದಿನಿಂದ ಇದೇ ದಿನಾಂಕ 8ರವರೆಗೆ ಬಸವಾಪಟ್ಟಣ ಶ್ರೀ ದುರುಗಮ್ಮದೇವಿ ಎಡೆಜಾತ್ರೆ ಮಹೋತ್ಸವ  ಕಾರ್ಯಕ್ರಮ ಆಯೋಜಿಸಲಾಗಿದೆ. ಇಂದು ಶ್ರೀ ದೇವಿಗೆ ಅಭಿಷೇಕ, ಮಹಾಮಂಗಳಾರತಿ ಮತ್ತು ಪೂಜೆ ನಡೆಯಲಿದೆ. ನಾಳೆ ಮಂಗಳವಾರ ಶ್ರೀ ದೇವಿಯ ಪೂಜಾ ಸಮಾರಂಭದ ಜೊತೆಗೆ ಅಲಂಕೃತ ಮಂಟಪದಲ್ಲಿ ವಾದ್ಯಗಳೊಂದಿಗೆ ದೇವಿ ಮೆರವಣಿಗೆ ನಡೆಯಲಿದೆ. ಏ.5ರಂದು ದೇವಿಗೆ ಹರಕೆ, ಮುಡಪು ಒಪ್ಪಿಸುವ ಕಾರ್ಯಕ್ರಮ ಇರುತ್ತದೆ.

ಏ.7 ಮತ್ತು 8ರಂದು ಎರಡು ದಿನಗಳ ಕಾಲ ರಾಜ್ಯ ಹಾಗೂ ರಾಷ್ಟ್ರಮಟ್ಟದ ಮುಕ್ತ ಬಯಲು ಜಂಗೀ ಕುಸ್ತಿ ಸ್ಪರ್ಧೆಗಳನ್ನು ಬೇತೂರು ರಸ್ತೆಯಲ್ಲಿರುವ ಕೊರಚರ ಕಾಲೋನಿಯಲ್ಲಿ ಏರ್ಪಡಿಸಲಾಗಿದೆ. ಈ ಕುಸ್ತಿಯಲ್ಲಿ ಗೆದ್ದ ಪೈಲ್ವಾನರಿಗೆ   ಪ್ರಶಸ್ತಿಗಳ ಜೊತೆಗೆ ನಗದು ಬಹುಮಾನ ಬೆಳ್ಳಿ ಗದೆ, ಬಂಗಾರದ ಪದಕಗಳನ್ನು ನೀಡಲಾಗುತ್ತದೆ ಎಂದು ದಾವಣಗೆರೆ ತಾಲ್ಲೂಕು ಕೊರಚರ ಸಂಘ ತಿಳಿಸಿದೆ.

error: Content is protected !!