ನಗರದಲ್ಲಿ ಇಂದು ಶ್ರೀ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವ

ನಗರದಲ್ಲಿ ಇಂದು ಶ್ರೀ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವ - Janathavani70ನೇ ವರ್ಷದ ಶ್ರೀ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವ, 2622ನೇ ಜಯಂತ್ಯೋತ್ಸ ವವನ್ನು ಎನ್.ಆರ್. ರಸ್ತೆಯಲ್ಲಿರುವ 1008 ಶ್ರೀ ಪಾರ್ಶ್ವನಾಥ ಜೈನ ಮಂದಿರದಲ್ಲಿ ಇಂದು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 7.30 ರಿಂದ 9ರವರೆಗೆ 108 ಕಲಶ ಅಭಿಷೇಕ, ಜಲಾಭಿಷೇಕ, ಗಂಧಾಭಿಷೇಕ, ಕ್ಷೀರಾಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಎಳನೀರು ಅಭಿಷೇಕ, ಮಾವಿನ ಹಣ್ಣಿನ ಅಭಿಷೇಕ, ಚತುಷ್ಕೋನ ಅಭಿಷೇಕ, (ಈಶಾನ್ಯ, ನೈರುತ್ಯ, ವಾಯುವ್ಯ, ಆಗ್ನೇಯ) ಶಾಂತಿಧಾರ ಅಭಿಷೇಕಗಳು ನಡೆಯಲಿವೆ. 

ಬೆಳಿಗ್ಗೆ 10.30 ರಿಂದ 1 ರವರೆಗೆ ಮಹಾವೀರ ತೀರ್ಥಂಕರರ ಭವ್ಯ ಮೆರವಣಿಗೆಯು ಶ್ರೀ ಪಾರ್ಶ್ವನಾಥ ಜಿನ ಮಂದಿರದಿಂದ ಪ್ರಾರಂಭಗೊಳ್ಳಲಿದೆ. ಮಧ್ಯಾಹ್ನ 1.30 ರಿಂದ ಜನ ಸಮಾಜದ ವತಿಯಿಂದ ಭೋಜನ, ಮಧ್ಯಾಹ್ನ 3.30 ಕ್ಕೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7ಕ್ಕೆ ಪದ್ಮಾಂಬ ಮಹಿಳಾ ಸಮಾಜದಿಂದ ಮಹಾವೀರ ತೀರ್ಥಂಕರರ ಬಾಲ ಲೀಲೋತ್ಸವ, ನಾಮಕರಣ ಹಾಗೂ ತೊಟ್ಟಿಲು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಹಾವೀರ್ ಯುವ ಮಂಚ್  ಪದಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!