ಹಿರೇಎಮ್ಮಿಗನೂರಿನಲ್ಲಿ ಇಂದಿನಿಂದ ಕಲ್ಲೇಶ್ವರ ಜಾತ್ರೆ

ಹೊಳಲ್ಕೆರೆ ತಾಲ್ಲೂಕು ಹಿರೇಎಮ್ಮಿಗನೂರು ಗ್ರಾಮ ದಲ್ಲಿ ಇಂದು ಶ್ರೀ ಕಲ್ಲೇಶ್ವರ ಸ್ವಾಮಿ ರಥೋತ್ಸವ ನಡೆಯ ಲಿದೆ. ಇಂದಿನಿಂದ ಮೂರು ದಿನಗಳ ಕಾಲ ಜಾತ್ರೆ ನಡೆಯ ಲಿದೆ.  ಇಂದು ಬೆಳಿಗ್ಗೆ ಅಭಿಷೇಕ, ಪೂಜಾ ಕಾರ್ಯ, ರಾತ್ರಿ ಶ್ರೀ ಸ್ವಾಮಿ ಸಕಲ ಬಿರುದಾವಳಿಗಳೊಂದಿಗೆ ಅರಣಿ-ಬಾಸಿಂಗ ತರುವುದು. ನಂತರ ದೇವರ ಊಟವನ್ನು ನಡೆಸಲಾಗುವುದು. ಮಾ. 31ರ ಶುಕ್ರವಾರ ಬೆಳಿಗ್ಗೆ ಉತ್ಸವ ನಂತರ 4 ಗಂಟೆಗೆ ಕೆಂಡದ ಅರ್ಚನೆ, ಸಂಜೆ ಶ್ರೀ ಸ್ವಾಮಿ ಮುಹೂರ್ತ ನಂತರ ಮಹಿಷಾಸಮರ್ದಿನಿ ದೇವಿಗೆ ಪೂಜೆ. ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.  ನಾಡಿದ್ದು ಶನಿವಾರ ಸಂಜೆ 5 ಗಂಟೆಗೆ ಶ್ರೀ ಕಲ್ಲೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ನಂತರ ಓಕುಳಿ ಆಟ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪಾಶೀರ್ವಾದಗಳಿಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.

error: Content is protected !!