ಕುಶಲ ಕರ್ಮಿಗಳಿಂದ ನಿವೇಶನಕ್ಕೆ ಅರ್ಜಿ

ದಾವಣಗೆರೆ, ಮಾ.7 – ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ದಾವ ಣಗೆರೆ ತಾಲ್ಲೂಕಿನ ಅಣಬೇರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಬರುವ ಪರಿ ಶಿಷ್ಟ ಜಾತಿಯ ಸಮಗಾರ, ಮಾದಾರ, ಡೋರ, ಮಚಗಾರ, ಮೋಚಿ ಚರ್ಮ ಕುಶಲ ಕರ್ಮಿ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ಕಡ್ಡಾಯವಾಗಿ ಚರ್ಮಗಾರಿಕೆಯಲ್ಲಿ ತೊಡಗಿದ್ದು, ನಿವೇ ಶನ ರಹಿತರಾಗಿರಬೇಕು, ಕುಟುಂ ಬದಲ್ಲಿ ಯಾರೂ ಸರ್ಕಾರಿ ನೌಕರಿ ಯಲ್ಲಿರಬಾ ರದು, ವಾರ್ಷಿಕ ವರಮಾನ ಗರಿಷ್ಟ ರೂ. 32.000 ಮಿತಿಯೊಳಗಿರ ಬೇಕು ಹಾಗೂ ಇ-ಶ್ರಮ್ ಕಾರ್ಡ್ ಹೊಂದಿರಬೇಕು ಎಂದು ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಸಂಯೋಜಕರು ತಿಳಿಸಿದ್ದಾರೆ.

error: Content is protected !!