ಅಖಿಲ ಭಾರತ ವೀರಶೈವದಿಂದ ಅಥಣಿ ವೀರಣ್ಣ ಅವರಿಗೆ ನಾಡಿದ್ದು ಸನ್ಮಾನ

ಅಖಿಲ ಭಾರತ ವೀರಶೈವದಿಂದ ಅಥಣಿ ವೀರಣ್ಣ ಅವರಿಗೆ ನಾಡಿದ್ದು ಸನ್ಮಾನ - Janathavaniದಾವಣಗೆರೆ, ಮಾ.7- ಪ್ರಣವ ಚಾರಿಟಬಲ್ ಸೊಸೈಟಿ ಅವರಿಂದ ಅಖಿಲ ಭಾರತ ವೀರಶೈವ ಇವರ ಸಹಯೋಗದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಡಾಕ್ಟರೇಟ್‌ ಪುರಸ್ಕೃತರಾದ ಕೈಗಾರಿಕೋದ್ಯಮಿ ಅಥಣಿ ವೀರಣ್ಣ ಅವರಿಗೆ ಇದೇ ದಿನಾಂಕ 11 ರ ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಸದಾಶಿವ ನಗರದಲ್ಲಿರುವ ವೀರಶೈವ ಲಿಂಗಾಯತ ಭವನದ ಆಡಿಟೋರಿಯಂನಲ್ಲಿ ಸನ್ಮಾನಿಸಲಾಗುವುದು.

ಅಥಣಿ ವೀರಣ್ಣ ಅವರೊಂದಿಗೆ ಎಸ್‌. ಪನ್ನಾ ರಾಜ್ ಹಾಗೂ ಹೆಚ್‌. ಶಿವಲಿಂಗಪ್ಪ ಅವರುಗಳನ್ನೂ ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಬಿ.ಎಸ್‌. ಪರಮಶಿವಯ್ಯ, ಶ್ರೀನಿವಾಸ ಎಂ. ಬಿದರಿ ಅವರುಗಳು ಉಪಸ್ಥಿತರಿರುವರು.

error: Content is protected !!