ನ್ಯಾಮತಿಯಲ್ಲಿ ಇಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ನ್ಯಾಮತಿಯಲ್ಲಿ ಇಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ - Janathavaniನ್ಯಾಮತಿ, ಫೆ.23 – ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ದ್ವಿತೀಯ ವರ್ಷದ ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ನಾಳೆ ದಿನಾಂಕ 24 ರಂದು ಎ.ಪಿ.ಎಂ.ಸಿ ಆವರಣದ ಸಭಾಂಗಣದಲ್ಲಿ  ನಡೆಯಲಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ತಹಶೀಲ್ದಾರ್ ಬಿ.ವಿ.ಗಿರೀಶ್‌ ಬಾಬು ತಿಳಿಸಿದ್ದಾರೆ.

ನಾಳೆ ಶುಕ್ರವಾರ ಬೆಳಿಗ್ಗೆ 7.30ಕ್ಕೆ ಎ.ಪಿ.ಎಂ.ಸಿ ಆವರಣದಲ್ಲಿ ತಹಶೀಲ್ದಾರ್ ಬಿ.ವಿ.ಗಿರೀಶ್‌ ಬಾಬು ಅವರು ರಾಷ್ಟ್ರ ಧ್ವಜಾರೋಹಣ, ಮುಖ್ಯಾಧಿಕಾರಿ ಪಿ.ಗಣೇಶರಾವ್ ನಾಡ ಧ್ವಜಾರೋಹಣ ಮತ್ತು ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಮಲ್ಲೇಶಪ್ಪ, ಕೆ.ನಾಗರತ್ನಮ್ಮ, ವಿ.ಎಂ.ಈಶ್ವರಯ್ಯ, ಆರ್.ಯತಿರಾಜು, ಪ್ಲಟೂನ್ ರಾಘವೇಂದ್ರ ಮುಳೇಕರ್, ಎಂ.ಜಿ. ಕವಿರಾಜ್, ಸಿ.ಕೆ.ಭೋಜ ರಾಜ, ಆರುಂಡಿ ನಾಗರಾಜ ಭಾಗವಹಿಸಲಿದ್ದಾರೆ.

ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ ಅವರು ಆಸ್ಥಾನ ವಿದ್ವಾನ್ ಬಿ.ದೇವೇಂದ್ರಪ್ಪ ಮಹಾದ್ವಾರ ಉದ್ಘಾಟನೆ ನೆರವೇರಿಸುವರು. ವೀರಭದ್ರೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 8.45ಕ್ಕೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ರಾಮಭೋವಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು. 

ರೈತ ಮುಖಂಡ ಎಚ್.ಎಸ್. ರುದ್ರಪ್ಪ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ನಿಕಟಪೂರ್ವ ಅಧ್ಯಕ್ಷ ಜೀನಹಳ್ಳಿ ಸಿದ್ಧಲಿಂಗಪ್ಪ ಅವರಿಂದ ಸಮ್ಮೇಳನಾಧ್ಯಕ್ಷ ಕುರುವ ಬಸವರಾಜ ಅವರು ಸರ್ವಾಧ್ಯಕ್ಷತೆ ಸ್ವೀಕರಿಸುವರು. 

ಶಾಸಕ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಡಾ.ಡಿ.ಬಿ.ಗಂಗಪ್ಪ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಕುರ್ಕಿ, ಉಪವಿಭಾಗಾಧಿಕಾರಿ  ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್ ಬಿ.ವಿ.ಗಿರೀಶ್‌ಬಾಬು, ಇಒ ರಾಮಭೋವಿ, ಡಾ.ಕೆಂಚಪ್ಪ ಭಂತಿ, ಪಿ.ಐ ರಾಘವೇಂದ್ರ ಕಾಂಡಿಕಿ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ರಾಮಪ್ಪ, ಎನ್‍ಜಿಒ ಅಧ್ಯಕ್ಷ ಜಿ.ಬಿ.ವಿಜಯಕುಮಾರ, ನ್ಯಾಮತಿ ನಾಗರಾಜಪ್ಪ, ನಿಕಟಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ, ಅಧ್ಯಕ್ಷ ಡಿ.ಎಂ. ಹಾಲಾರಾಧ್ಯ ಉಪಸ್ಥಿತರಿರಲಿದ್ದಾರೆ. 

ಸಾಹಿತಿ ಎಸ್.ಆರ್.ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಗೋಷ್ಠಿ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ನ್ಯಾಮತಿ ತಾಲ್ಲೂಕಿನ ಹೋರಾಟಗಾರರ ಕೊಡುಗೆ ಕುರಿತು ಶಶಿಧರಗೌಡ್ರು ಮತ್ತು ಮಹಿಳೆಯರ ಸಬಲೀಕರಣದ ಸವಾಲುಗಳು ಕುರಿತು ದಾವಣಗೆರೆ ಮಹಿಳಾ ಪ್ರಥಮದರ್ಜೆ ಕಾಲೇಜಿನ ಜಿ.ಕಾವ್ಯಶ್ರೀ ವಿಷಯ ಮಂಡನೆ ಮಾಡಲಿದ್ದಾರೆ. ಜಿಲ್ಲಾ ಕಸಾಪ ಕಾರ್ಯದರ್ಶಿ ಬಿ.ದಿಳ್ಯಪ್ಪ, ಪ್ರಾಂಶುಪಾಲ ಬಿ.ಆನಂದ, ಎಸ್.ಆರ್.ಗಿರಿಜಮ್ಮ, ವೀರಭದ್ರಸ್ವಾಮಿ ಉಪಸ್ಥಿತಿ ವಹಿಸುವರು.

ನಾಗರಾಜಪ್ಪ ಅರ್ಕಾಚಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ವಿ.ಪಿ.ಪೂರ್ಣಾನಂದ, ಜೆ.ವಿ. ಭೀಮಾಕುಮಾರ, ತಾಲ್ಲೂಕು ಯೋಜನಾಧಿಕಾರಿ ಬಸವರಾಜ ಅಂಗಡಿ ಭಾಗವಹಿಸುವರು. 

ಗೋವಿನಕೋವಿ ಹಾಲಸ್ವಾಮಿ ಮಠದ ಸದ್ಗುರು ಶಿವಯೋಗಿ ಮಹಾಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕುರುವ ಬಸವರಾಜ್ ಸರ್ವಾಧ್ಯಕ್ಷತೆ ವಹಿಸುವರು, ಎಸ್.ಎಚ್.ಹೂಗಾರ ಸಮಾರೋಪ ಭಾಷಣ ಮಾಡಲಿದ್ದು, ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸುವರು, ಕಸಾಪ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಡಿಡಿಪಿಐ ತಿಪ್ಪೇಶಪ್ಪ, ಮಾಜಿ ಅಧ್ಯಕ್ಷ ಉಜ್ಜಿನಪ್ಪ, ಬಿ.ಆನಂದ, ಮಹಾಂತ ಸ್ವಾಮಿ, ಎಚ್.ಎಲ್.ಉಮಾ, ಬಿ.ಕೆ.ಶ್ರೀನಿವಾಸ, ತಿಪ್ಪೇಶಪ್ಪ, ರುದ್ರಪ್ಪ, ಮೃತ್ಯುಂಜಯ ಸ್ವಾಮಿ ಉಪಸ್ಥಿತರಿರುವರು.

ಸಮ್ಮೇಳನದಲ್ಲಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.

ಸಂಜೆ 6 ಗಂಟೆಗೆ ನಡೆಯುವ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ಜಾನಪದ ಹಾಡುಗಾರಿಕೆ, ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವವು. ಬೆಂಗಳೂರಿನ ಪುಸ್ತಕ ಪ್ರಕಾಶನದಿಂದ ಪುಸ್ತಕಗಳ ಮಾರಾಟ ಮಳಿಗೆ ತೆರೆಯಲಿದೆ.

error: Content is protected !!