ಕೊಲೆ ಪ್ರಕರಣದ ಆರೋಪಿತರ ಬಂಧನ

ದಾವಣಗೆರೆ, ಫೆ. 15- ಇಲ್ಲಿನ ಚೌಡೇಶ್ವರಿ ನಗರದ ಬಿ.ಎಡ್. ಕಾಲೇಜು ಹಿಂಭಾಗದ ರಸ್ತೆಯಲ್ಲಿ ಫೆ. 12 ರಂದು ಸಂಜೆ ನಡೆದ ತಾಲ್ಲೂಕಿನ ಕಿತ್ತೂರು ಗ್ರಾಮದ ಮೈಲಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೇಶ್, ಶಿವಮೂರ್ತೆಪ್ಪ ಎಂಬುವವರನ್ನು ಬಂಧಿಸಲಾಗಿದೆ.

ಕಿತ್ತೂರಿನ ಶಿವಮೂರ್ತೆಪ್ಪ ಈತನ ಮಗ ಕಿರಣ ಹಾಗೂ ಮಲ್ಲೇಶ್ ಎಂಬುವರು ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಮೂರು ಎಕರೆ ಜಮೀನನ್ನು ಸಾಗುವಳಿ ಮಾಡುವ ವಿಚಾರದಲ್ಲಿ ಹಾಗೂ ಕಣದ ಜಾಗದ ವಿಚಾರದಲ್ಲಿ ವೈಷಮ್ಯದಿಂದ ಪಿರ್ಯಾದಿ ಮಗನಾದ ಮೈಲಾರಿಗೆ ಕೈ ಕಾಲುಗಳಿಂದ ಹೊಡೆದು ಚಾಕುವಿನಿಂದ ಚುಚ್ಚಿದ್ದರಿಂದ ಮೈಲಾರಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

error: Content is protected !!