ದರೋಡೆಗೆ ತೆರಳಿದ್ದ ಶ್ರೀರಾಮ ನಗರದ ಯುವಕರು

ಯುವಕರ ಮೇಲೆ ಲಾರಿ ಹರಿಸಿದ ಚಾಲಕ, ಮೂವರು ದರೋಡೆಕೋರರ ಬಂಧನ

ದಾವಣಗೆರೆ, ಫೆ.15- ಕಳೆದ ಶನಿವಾರ ಆನಗೋಡು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೈಕ್ ಅಪಘಾತದಲ್ಲಿ ಶ್ರೀರಾಮನಗರದ ಮೂವರು ಮೃತಪಟ್ಟ ಪ್ರಕರಣ ಬೇರೆಯದೇ ತಿರುವು ಪಡೆದುಕೊಂಡಿದೆ.

ಅಂದು ಒಂದು ಬೈಕ್‌ನಲ್ಲಿ ಪರಶು ರಾಮ, ನಾಗರಾಜ, ಸಂದೇಶ ಹಾಗೂ ಅವರೊಂದಿಗೆ ಮತ್ತೊಂದು ಬೈಕ್‌ನಲ್ಲಿ ಗಣೇಶ, ರಾಹುಲ್ ಮತ್ತು ಶಿವುಕುಮಾರ ಅವರು ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿ ಚಾಲಕನನ್ನು ಹೆದರಿಸಿ ಹಲ್ಲೆ ಮಾಡಿ, ಚಾಲಕನಿಂದ 8 ಸಾವಿರ ರೂ. ನಗದು, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ದರೋಡೆ ಮಾಡಿದ್ದಾರೆ. ದರೋಡೆ ಮಾಡಿ ತೆರಳುವಾಗ ಲಾರಿ ಚಾಲಕನು ಬೈಕುಗಳ ಮೇಲೆ ಲಾರಿ ಹತ್ತಿಸಿಕೊಂಡು ಹೋಗಿದ್ದರ ಪರಿಣಾಮ ಒಂದು ಬೈಕಿನಲ್ಲಿ ಹೋಗುತ್ತಿದ್ದ ಪರಶುರಾಮ, ಶಿವಕುಮಾರ ಮತ್ತು ಸಂದೇಶ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಬೈಕ್‌ನಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಇದೀಗ ಪೊಲೀಸರು ಉಳಿದ ಮೂವರು ದರೋಡೆಕೋರರು ಹಾಗೂ ದರೋಡೆಕೋರರ ಮೇಲೆ ಲಾರಿ ಹತ್ತಿಸಿದ ಚಾಲಕ ಉತ್ತರ ಪ್ರದೇಶದ ಭೋಲೆ ಯಾದವ್‌ ನನ್ನು ಹಾಗೂ ಲಾರಿಯನ್ನು ಚೆನ್ನೈನಿಂದ ಪತ್ತೆ ಮಾಡಿ ದಸ್ತಗಿರಿ ಮಾಡಿದ್ದು, ನ್ಯಾಯಾಂಗ ಬಂಧನಕ್ಕೆ ಹಾಜರು ಪಡಿಸಲಾಗಿದೆ. ಪ್ರಕರಣ ಬೇಧಿಸುವಲ್ಲಿ ಶ್ರಮಿಸಿದ ಪೊಲೀಸ್ ಇಲಾಖೆ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಎಸ್ಪಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ.ಬಸರಗಿ ಪ್ರಶಂಸಿಸಿದ್ದಾರೆ.

error: Content is protected !!