ಸತ್ಯದ ಗೆಲುವಲ್ಲ, ಮೋಸದ ಜಯ

ಸತ್ಯದ ಗೆಲುವಲ್ಲ, ಮೋಸದ ಜಯ - Janathavaniದಾವಣಗೆರೆ, ನ. 11- ಹಣ ಬಲ, ಅಧಿಕಾರ ದುರ್ಬಳಕೆಯಿಂದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ ಛೇಡಿಸಿದ್ದಾರೆ. ಆರ್.ಆರ್.ನಗರ ಮತ್ತು ಶಿರಾ ಉಪ ಚುನಾವಣೆಯಲ್ಲಿ ಹಳ್ಳಿ ಹಳ್ಳಿಗಳಲ್ಲೂ ಬೇರೆ-ಬೇರೆ ಜಿಲ್ಲೆಯ ಬಿಜೆಪಿ ಮುಖಂಡರು ಹಣದ ಹೊಳೆ ಹರಿಸಿ, ಆ ಮೂಲಕ ಗೆಲುವು ಸಾಧಿಸಿದ್ದಾರೆ. ಇದು ಸತ್ಯದ ಗೆಲುವು ಅಲ್ಲ, ಮೋಸದ ಜಯ ಎಂದಿದ್ದಾರೆ.

ಹಾಲಿ, ಮಾಜಿ ಸಚಿವರು, ಶಾಸಕರ ದಂಡೇ ಚುನಾವಣೆಯಲ್ಲಿ ನಿಂತು ಹಣ, ಹೆಂಡ ಹಂಚಿ ಮತದಾರರನ್ನು ದಿಕ್ಕು ತಪ್ಪಿಸಿದೆ. ಈ ಕಾರಣ ಬಿಜೆಪಿ ಗೆದ್ದಿದೆಯೋ ವಿನಃ ಬೇರೆ ಯಾವುದೇ ಬಿಜೆಪಿ ಪರ ಅಲೆ ಇಲ್ಲ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

error: Content is protected !!